ರಸ್ತೆ ದುರಂತಕ್ಕೆ ಕನಿಷ್ಠ 7 ಬಲಿ

Update: 2019-02-19 15:25 GMT

ಲಕ್ನೋ,ಫೆ.19: ಉತ್ತರಪ್ರದೇಶದ ಮಥುರಾ ಸಮೀಪ ಮಂಗಳವಾರ ವೇಗವಾಗಿ ಧಾವಿಸುತ್ತಿದ್ದ ಆ್ಯಂಬುಲೆನ್ಸೊಂದು, ರಸ್ತೆವಿಭಾಜಕಕ್ಕೆ ಢಿಕ್ಕಿಹೊಡೆದು, ಬಳಿಕ ರಸ್ತೆಯ ಇನ್ನೊಂದು ಬದಿಯಲ್ಲಿ ಸಂಚರಿಸುತ್ತಿದ್ದ ಕಾರಿಗೆ ಗುದ್ದಿದ್ದರಿಂದ ಸಂಭವಿಸಿದ ಭೀಕರ ಅವಘಡದಲ್ಲಿ ಕನಿಷ್ಠ ಏಳು ಮಂದಿ ಮೃತಪಟಿದ್ದಾರೆ ಹಾಗೂ ಇತರ ಮೂವರು ಗಂಭೀರವಗಿ ಗಾಯಗೊಂಡಿದ್ದಾರೆ.

ಇಂದು ಮುಂಜಾನೆ ಮಥುರಾ ಸಮೀಪದ, ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಅವಘಡಕ್ಕೀಡಾದ ಆ್ಯಂಬುಲೆನ್ಸ್, ಶವವೊಂದನ್ನು ಆಗ್ರಾದಿಂದ ನೊಯ್ಡಾಗೆ ಸಾಗಿಸುತಿತ್ತೆಂದು ತಿಳಿದುಬಂದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News