ಚುನಾವಣೆ ಹಿನ್ನೆಲೆ: ಪಶ್ಚಿಮ ವಲಯ ಪಿಎಸ್ಸೈಗಳ ವರ್ಗಾವಣೆ

Update: 2019-02-19 15:26 GMT

ಮಂಗಳೂರು, ಫೆ.19: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮ ವಲಯದ ಪಿಎಸ್ಸೈ ಮಟ್ಟದ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ.

ರುಕ್ಮಯ್ಯ ಮೂಲ್ಯ ಜಿ. ಅವರು ದಕ್ಷಿಣ ಕನ್ನಡ ಸಿ.ಇ.ಎನ್.ನಿಂದ ದಕ್ಷಿಣ ಕನ್ನಡ ಡಿಸಿಆರ್‌ಬಿಗೆ, ಸಂದೀಪ್ ಕುಮಾರ್ ಶೆಟ್ಟಿ ಡಿಸಿಆರ್‌ಬಿಯಿಂದ ದ.ಕನ್ನಡ ಸಿ.ಇ.ಎನ್.ಗೆ, ಬಂಟ್ವಾಳ ನಗರ ಠಾಣೆಯ ಹರೀಶ್ ಎಂ.ಆರ್. ಸುಳ್ಯ ಠಾಣೆಗೆ, ಸುಳ್ಯ ಠಾಣೆಯ ಮಂಜುನಾಥ ಬಂಟ್ವಾಳ ಸಂಚಾರ ಠಾಣೆಗೆ, ಎಫ್.ಎಂ.ಎಸ್ ನಿಂದ ಸುಧಾಕರ ತೋನ್ಸೆ ಅವರನ್ನು ಬಂಟ್ವಾಳ ನಗರ ಠಾಣೆಗೆ, ಬಂಟ್ವಾಳ ಸಂಚಾರ ಠಾಣೆಯ ಕೆ. ಮುಹಮ್ಮದ್ ಹೆದ್ದಾರಿ ಗಸ್ತು ಪಡೆ ಮಂಗಳೂರು, ಮಾಧವ ಕೆ. ಸುಳ್ಯ ಠಾಣೆಯಿಂದ ಎಫ್.ಎಂ.ಎಸ್ ಮಂಗಳೂರು, ಪುಂಜಾಲಕಟ್ಟೆಯ ಸೌಮ್ಯ ಜೆ. ಅವರಿಗೆ ಉಡುಪಿ ಅಮಾಸೆಬೈಲು ಠಾಣೆಗೆ ವರ್ಗಾಯಿಸಲಾಗಿದೆ.

ಬೆಳ್ತಂಗಡಿ ನಗರ ಠಾಣೆಯಿಂದ ಭಾರತಿ ಚಿಕ್ಕಮಗಳೂರು ಬಾಳೂರು ಠಾಣೆಗೆ, ಪುತ್ತೂರು ಸಂಚಾರ ಠಾಣೆಯ ನಾರಾಯಣ ರೈ ಬಂಟ್ವಾಳ ಸಂಚಾರ ಠಾಣೆಗೆ, ಕಂಕನಾಡಿ ಠಾಣೆಯ ಜಾನಕಿ ಕಾಪು ಠಾಣೆಗೆ, ಮಂಗಳೂರು ಉತ್ತರ ಠಾಣೆಯ ಎಂ.ಸುಂದರ ಯಲ್ಲಾಪುರ ಠಾಣೆಗೆ, ಕಾವೂರು ಠಾಣೆಯ ರೋಸಮ್ಮ ಕುಮಟಾ ಠಾಣೆಗೆ, ಸುರತ್ಕಲ್ ಠಾಣೆಯ ಸುಂದರಿ ಸಿರ್ಸಿ ಹೊಸಮಾರುಕಟ್ಟೆ ಠಾಣೆಗೆ, ಮಂಗಳೂರು ಸೆನ್ ಠಾಣೆಯ ಮಂಜುಳಾ ಉತ್ತರ ಕನ್ನಡ ಅಂಬಿಕಾನಗರ ಠಾಣೆಗೆ, ಬರ್ಕೆ ಠಾಣೆಯ ಶೋಭ ಯಲ್ಲಾಪುರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News