ಕಾಶ್ಮೀರಿಗಳಿಗೆ ನೆರವಾಗುವ ಟ್ಟೀಟ್ ಮಾಡಿದ ಬರ್ಖಾ ದತ್‌ಗೆ ಕಿರುಕುಳ

Update: 2019-02-19 15:47 GMT

ಹೊಸದಿಲ್ಲಿ.ಫೆ.19: ಪತ್ರಕರ್ತೆ ಬರ್ಖಾ ದತ್ ಅವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕಿರುಕುಳದ ಆರೋಪಗಳ ಕುರಿತಂತೆ ತ್ವರಿತ ತನಿಖೆಯನ್ನು ಆರಂಭಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯು)ವು ಮಂಗಳವಾರ ದಿಲ್ಲಿ ಪೊಲೀಸ್ ಆಯುಕ್ತೆ ಅಮೂಲ್ಯಾ ಪಟ್ನಾಯಕ್ ಅವರಿಗೆ ನಿರ್ದೇಶ ನೀಡಿದೆ.

ದಾಳಿಗಳಿಗೆ ಗುರಿಯಾಗುತ್ತಿರುವ ಕಾಶ್ಮೀರಿಗಳಿಗೆ ನೆರವಾಗುವ ಕೊಡುಗೆಯನ್ನು ತಾನು ಮುಂದಿಟ್ಟ ಬಳಿಕ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಿರುಕುಳಗಳನ್ನು ನೀಡಲಾಗುತ್ತಿದೆ ಎಂಬ ದತ್ ಅವರ ಆರೋಪಗಳ ಕುರಿತು ಮಾಧ್ಯಮ ವರದಿಗಳನ್ನು ತಾನು ಗಮನಿಸಿರುವುದಾಗಿ ಆಯೋಗವು ಪಟ್ನಾಯಕ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ದಿಲ್ಲಿ ಪೊಲೀಸರೊಂದಿಗೆ ವಿಷಯವನ್ನೆತ್ತಿದ್ದಕ್ಕೆ ಆಯೋಗಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿ ಟ್ವೀಟಿಸಿರುವ ದತ್,ತಾನು ದಿಲ್ಲಿ ಪೊಲೀಸರ ಉತ್ತರವನ್ನು ನಿರೀಕ್ಷಿಸುತ್ತಿದ್ದೇನೆ. ಸೋಮವಾರ ತಾನು ಅವರಿಗೆ ದೂರು ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News