'ಬೋಟು ನಾಪತ್ತೆ ಪ್ರಕರಣ: ನೌಕಾಪಡೆಯಿಂದ ಸತ್ಯ ಬಹಿರಂಗಗೊಳಿಸಿ'

Update: 2019-02-20 11:59 GMT

ಉಡುಪಿ, ಫೆ.20: ಸುವರ್ಣ ತ್ರಿಭುಜ ಬೋಟು ಸಹಿತ ಏಳು ಮಂದಿ ನಾಪತ್ತೆಯಾಗಿ 65 ದಿನಗಳಾದರೂ ಈವರೆಗೆ ಯಾವುದೇ ಕುರುಹುಗಳು ದೊರೆತಿಲ್ಲ. ನೌಕಾಪಡೆಯ ಐ-ಎಸ್‌ಎಸ್ ಕೊಚ್ಚಿ ಎಂಬ ಹಡಗು ಢಿಕ್ಕಿ ಹೊಡೆದು ಸುವರ್ಣ ತ್ರಿಭುಜ ಬೋಟು ಹಾನಿಯಾಗಿ ಮುಳುಗಿರುವುದು ನಮ್ಮ ಬಲವಾದ ಶಂಕೆ. ಆದರೆ ನೌಕಾಪಡೆ ನಮ್ಮಿಂದ ಎಲ್ಲವನ್ನು ಮುಚ್ಚಿಡುತ್ತಿದೆ. ಒಂದೆರೆಡರು ದಿನಗಳಲ್ಲಿ ನೌಕಪಡೆಯಿಂದ ನಮಗೆ ಸತ್ಯ ತಿಳಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಒತ್ತಾಯಿಸಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿಯ ಶಾರದ ಇಂಟರ್ ನ್ಯಾಶನಲ್ ಹೋಟೆಲ್ ಸಭಾಂಗಣದಲ್ಲಿ ಬುಧವಾರ ನಡೆದ ‘ಭಾರತ್ ಕೀ ಮನ್ ಕೀ ಬಾತ್’ ಕರಾವಳಿಯ ಮೀನುಗಾರರ ಜೊತೆ ಸಂವಾದ ಹಾಗೂ ಪ್ರಬುದ್ಧರ ಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.

ನೌಕಾಪಡೆಯ ಐ-ಎಸ್‌ಎಸ್ ಕೊಚ್ಚಿ ಹಡಗಿನ ಅಡಿಭಾಗದಲ್ಲಿ ಆಗಿರುವ ಹಾನಿಯ ಹಿನ್ನೆಲೆಯಲ್ಲಿ ಸಮುದ್ರ ಆಳದಲ್ಲಿ ಸಟ್ಲೇಜ್ ಹಡಗಿನ ಮೂಲಕ ಹುಡುಕಾಟ ನಡೆಸಿದಾಗ 21.5 ಮೀಟರ್ ಉದ್ದದ ಬೋಟಿನ ರೆಕ್ಕೆಯ ಭಾಗವೊಂದು ಗೋಚರಿಸಿತ್ತು. ಆದರೆ ಇತ್ತೀಚೆಗೆ ಬಂದ ಮಾಹಿತಿಯಂತೆ ಆಳದಲ್ಲಿ ಕಂಡು ಬಂದಿರುವುದು ಬೋಟು ಅಲ್ಲ, ಕಲ್ಲುಬಂಡೆ ಎಂದು ಹೇಳ ಲಾಗಿತ್ತು. ಹಾಗಾದರೆ ಬಲಿಷ್ಠವಾದ ಐ-ಎಸ್‌ಎಸ್ ಕೊಚ್ಚಿ ಹಡಗಿಗೆ ಹಾನಿ ಯಾಗುವಂತೆ ಢಿಕ್ಕಿ ಹೊಡೆದಿರುವುದು ಏನು ಎಂಬುದು ನಮ್ಮ ಪ್ರಶ್ನೆಯಾಗಿದೆ ಎಂದರು.

ನಾಪತ್ತೆಯಾದ ಮೀನುಗಾರರ ಮನೆಯವರು ಕಣ್ಣೇರಿನಲ್ಲಿಯೇ ದಿನ ಕಳೆಯು ತ್ತಿದ್ದಾರೆ. ಪ್ರತಿದಿನ ನಮ್ಮನ್ನು ಸಂಪರ್ಕಿಸಿ ಕೇಳುತ್ತಲೇ ಇದ್ದಾರೆ. ಕರಾವಳಿ ಯಲ್ಲಿ ಇಂತಹ ಘಟನೆ ಈವರೆಗೆ ನಡೆದಿಲ್ಲ. ಇನ್ನು ಯಾವುದಕ್ಕೂ ಕಾಯುವ ಪರಿಸ್ಥಿತಿ ಯಲ್ಲಿ ನಾವು ಇಲ್ಲ. ನೌಕಾಪಡೆಯ ಬೋಟಿಗೆ ಹಾನಿಯಾಗಿರುವುದು ಹೇಗೆ ಎಂಬುದಕ್ಕೆ ನಮಗೆ ಕೂಡಲೇ ಉತ್ತರಬೇಕು. ಫೆ.21ರಂದು ಬೆಂಗಳೂರಿಗೆ ಆಗಮಿಸುವ ರಕ್ಷಣಾ ಸಚಿವರಿಂದ ನಮಗೆ ಸತ್ಯ ತಿಳಿಸಬೇಕು ಎಂದು ಅವರು ತಿಳಿಸಿದರು.

ನಾಪತ್ತೆಯಾದ ಮೀನುಗಾರರ ಮನೆಯವರು ಕಣ್ಣೇರಿನಲ್ಲಿಯೇ ದಿನ ಕಳೆಯು ತ್ತಿದ್ದಾರೆ. ಪ್ರತಿದಿನ ನಮ್ಮನ್ನು ಸಂಪರ್ಕಿಸಿ ಕೇಳುತ್ತಲೇ ಇದ್ದಾರೆ. ಕರಾವಳಿಯಲ್ಲಿ ಇಂತಹ ಘಟನೆ ಈವರೆಗೆ ನಡೆದಿಲ್ಲ. ಇನ್ನು ಯಾವುದಕ್ಕೂ ಕಾಯುವ ಪರಿಸ್ಥಿತಿ ಯಲ್ಲಿ ನಾವು ಇಲ್ಲ. ನೌಕಾಪಡೆಯ ಬೋಟಿಗೆ ಹಾನಿಯಾಗಿರುವುದು ಹೇಗೆ ಎಂಬುದಕ್ಕೆ ನಮಗೆ ಕೂಡಲೇ ಉತ್ತರಬೇಕು. ಫೆ.21ರಂದು ಬೆಂಗಳೂರಿಗೆ ಆಗಮಿಸುವ ರಕ್ಷಣಾ ಸಚಿವರಿಂದ ನಮಗೆ ಸತ್ಯ ತಿಳಿಸಬೇಕು ಎಂದು ಅವರು ತಿಳಿಸಿದರು.

ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ನಾಪತ್ತೆಯಾದ ಬೋಟು ಹಾಗೂ ಮೀನುಗಾರರು ಎಲ್ಲಿದ್ದಾರೆ, ಅವರ ಸ್ಥಿತಿ ಏನು ಎಂಬುದು ಈವರೆಗೆ ಗೊತ್ತಾಗಿಲ್ಲ. ಪ್ರಧಾನ ಮಂತ್ರಿ, ರಕ್ಷಣಾ ಸಚಿವರು, ಗೃಹ ಸಚಿವರು ಭೇಟಿ ಮಾಡಲಾಯಿತು. ನಿತಿನ್ ಗಡ್ಕರಿ, ಮಹಾರಾಷ್ಟ್ರ, ಗೋವಾ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಯಿತು. ಆದರೂ ಈತನಕ ಸುವರ್ಣ ತ್ರಿಭುಜ ಬೋಟು ಪತ್ತೆ ಮಾಡಲು ಆಗಿಲ್ಲ. 68 ದಿನಗಳಾದರೂ ಯಾವುದೇ ಕುರುಹು ಪತ್ತೆಯಾಗದಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅವಿನಾಶ್ ರೈ ಖನ್ನಾ ಮಾತನಾಡಿ, ಸರಕಾರ ಬೋಟು ಸಹಿತ ಮೀನುಗಾರರನ್ನು ಹುಡುಕುವ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ನಿಮಗೆ ಯಾವುದಾದರೂ ಮಾಹಿತಿ ಇದ್ದರೆ ನಮಗೆ ತಿಳಿಸಿ, ಅವರು ಎಲ್ಲೇ ಇದ್ದರೂ ನಾವು ಸುರಕ್ಷಿತವಾಗಿ ಕರೆದುಕೊಂಡು ಬರುತ್ತೇವೆ ಎಂದು ಭರವಸೆ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಮುಖಂಡ ಉದಯ ಕುಮಾರ್ ಶೆಟ್ಟಿ, ಬಿಜೆಪಿ ಮೀನುಗಾರರ ಪ್ರಕೋಷ್ಠದ ಅಧ್ಯಕ್ಷ ಸದಾನಂದ ಬಳ್ಕೂರು, ಶೋಭೇಂದ್ರ ಸಸಿಹಿತ್ಲು, ಮಹೇಶ್ ಠಾಕೂರು ಮೊದಲಾದವರು ಉಪಸ್ಥಿತರಿದ್ದರು. ಯಶ್ ಪಾಲ್ ಸುವರ್ಣ ಸ್ವಾಗತಿಸಿದರು. ಕುತ್ಯಾರ್ ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕೋಸ್ಟಲ್ ಗಾರ್ಡ್‌ನಲ್ಲಿ ಮೀನುಗಾರರಿಗೆ ಉದ್ಯೋಗ ನೀಡಿ

ಮಲ್ಪೆಯಲ್ಲಿರುವ ಕೋಸ್ಟಲ್ ಗಾರ್ಡ್‌ನಿಂದ ಮೀನುಗಾರರಿಗೆ ಯಾವುದೇ ಪ್ರಯೋಜನ ಇಲ್ಲ. ಅಪಾಯದಲ್ಲಿ ಸಿಲುಕಿರುವ ಬೋಟುಗಳ ರಕ್ಷಣೆ ಕೂಡ ಇವರಿಂದ ಆಗುತ್ತಿಲ್ಲ. ಇಲ್ಲಿ ಯಾವುದೇ ಈಜುಪಟುಗಳಿಲ್ಲ. ಆದುದರಿಂದ ಈಜುಪಟುಗಳಾದ ಮೀನುಗಾರರಿಗೆ ಇದರಲ್ಲಿ ಉದ್ಯೋಗ ಕೊಡುವ ಕೆಲಸ ಆಗಬೇಕು ಎಂದು ಸತೀಶ್ ಕುಂದರ್ ಒತ್ತಾಯಿಸಿದರು.

ಕೃಷಿಗೆ ಸಿಗುವ ಎಲ್ಲ ಸವಲತ್ತುಗಳು ಮೀನುಗಾರರಿಗೆ ಸಿಗಬೇಕು. ಡಿಸೇಲ್ ಬಗ್ಗೆ ಇರುವ ರೋಡ್ ಸೆಸ್ ರದ್ದುಗೊಳಿಸಬೇಕು. ಸೀಮೆಎಣ್ಣೆಗೆ ಸಬ್ಸಿಡಿ ನೀಡ ಬೇಕು. ಮೀನುಗಾರಿಕೆಗೆ ಸಂಬಂಧಿಸಿ ಕರಾವಳಿ ರಾಜ್ಯಗಳಲ್ಲಿ ಏಕರೂಪದ ಕಾನೂನು ಜಾರಿಗೆ ತರಬೇಕು ಎಂದು ಮೀನುಗಾರ ಮುಖಂಡರು ಒತ್ತಾಯಿಸಿ ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News