ಮಂಗಳೂರು: ಡಿಕೆಎಂಎ ವತಿಯಿಂದ ಸಹಾಯಧನ ವಿತರಣೆ

Update: 2019-02-20 14:41 GMT

ಮಂಗಳೂರು, ಫೆ. 20: ದಕ್ಷಿಣ ಕನ್ನಡ ಮುಸ್ಲಿಂ ಅಸೋಷಿಯೇಷನ್‍ವತಿಯಿಂದತಮ್ಮ ಫಲಾನುಭವಿ ಸದಸ್ಯ ಮರಣಹೊಂದಿದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ 2 ಲಕ್ಷ ರೂ. ಸಹಾಯ ಧನ ನೀಡುವ ಯೋಜನೆ ಚಾಲ್ತಿಯಲ್ಲಿದೆ. ಅದರಂತೆ ನಾಲ್ಕು ತಿಂಗಳ ಹಿಂದೆ ಮೃತರಾದ 36 ವರ್ಷ ಪ್ರಾಯದ ಬಿ.ಸಿ ರೋಡ್ ಶಾಂತಿಯಂಗಡಿಯ ಮುಹಮ್ಮದ್‍ ರಿಯಾಝ್‍ರವರ ಕುಟುಂಬಕ್ಕೆ 2 ಲಕ್ಷ ರೂ. ಸಹಾಯ ಧನವನ್ನು ವಿತರಿಸಲಾಯಿತು.

ಮುಹಮ್ಮದ್‍ ರಿಯಾಝ್‍  ತಾಯಿ, ಪತ್ನಿ ಹಾಗೂ ಇಬ್ಬರುಪುಟ್ಟ ಮಕ್ಕಳನ್ನು ಅಗಲಿದ್ದಾರೆ. ಡಿಕೆಎಂಎಅಧ್ಯಕ್ಷ ಹಾಜಿಎಸ್.ಎಂ ರಶೀದ್ ಸಹಾಯಧನವನ್ನು ಮೃತರ ಪತ್ನಿರಮ್ಲತ್‍ರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಡಿಕೆಎಂಎ ಉಪಾಧ್ಯಕ್ಷ ಮನ್ಸೂರ್ ಅಹಮದ್‍ ಆಝಾದ್ ಹಾಗೂ ಸದಸ್ಯ ರಿಫಾತ್‍ ಅಹಮದ್‍ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News