‘ಶೃದ್ಧಾಂಜಲಿ’ ಕೊಂಕಣಿ ಕಥಾ ಸಂಕಲನ ಬಿಡುಗಡೆ

Update: 2019-02-20 14:45 GMT

ಮಂಗಳೂರು, ಫೆ. 20: ನವೀನ್ ಮೆಂಡೊನ್ಸಾ ಪಾಂಬೂರ್ ಬರೆದು, ಸೃಜನಾ ಪ್ರಕಾಶನ ಪ್ರಕಟಿಸಿದ ‘ಶೃದ್ಧಾಂಜಲಿ’ ಕೊಂಕಣಿ ಕಥಾ ಸಂಕಲನವನ್ನು ಬಹರೇನಿನ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.

ಪ್ರಜೋತ್ ಡೆಸಾ ಸಂಗೀತ ರಸಮಂಜರಿ ಕಾರ್ಯಕ್ರಮದ ಸಭಾ ಕಾರ್ಯಕ್ರಮದ ವೇಳೆ ಪ್ರೆಸಿಲ್ಲಾ-ಸೈಮನ್ ಮಚಾದೊ ಜೋಡಿ ಪುಸ್ತಕ ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ಸೆಕ್ರೆಡ್ ಹಾರ್ಟ್ ಚರ್ಚ್ ಮನಾಮ ಇದರ ಸಹಾಯಕ ಧರ್ಮಗುರು ವಂ. ಡ್ಯಾರೆಲ್ ಫೆರ್ನಾಂಡಿಸ್, ಬೆಳ್ಳೆ ವಿಷನ್ ಬಹರೇನ್ ಸ್ಥಾಪಕಾಧ್ಯಕ್ಷ ಜೊಯೆಲ್ ಡೆಸಾ, ಕೊಂಕಣಿ ಕುಟಮ್ ಬಹರೇನ್ ಸಮಿತಿ ಸದಸ್ಯ ರೊನಾಲ್ಡ್ ಫೆರ್ನಾಂಡಿಸ್, ಬಹರೇನ್ ಕೊಂಕಣ್ಸ್ ಸಂಚಾಲಕರಾದ ವಿನ್ಸೆಂಟ್ ಸಿಕ್ವೇರಾ, ಮೆಲ್ವಿನ್ ರೊಡ್ರಿಗಸ್, ಮೆಲ್ವಿನ್ ಮೆಂಡೊನ್ಸಾ, ಲೇಖಕರ ಪತ್ನಿ-ಮಕ್ಕಳಾದ ಜುಡಿತ್ ಹಾಗೂ ಜೊಲ್ವಿನ್ ಮತ್ತು ಎಲ್‌ರೊಯ್ ಉಪಸ್ಥಿತರಿದ್ದರು.

ಪುಸ್ತಕ ಬಬಿಡುಗಡೆ ಸಮಾರಂಭದಲ್ಲಿ ಸುಮಾರು 125 ಪುಸ್ತಕಗಳು ಮಾರಾಟವಾದವು. ಈ ಮೊತ್ತವನ್ನು ಊರಿನ ಬಡ ಹೆಣ್ಣುಮಕ್ಕಳ ವಿದ್ಯಾಭಾಸ್ಯಕ್ಕಾಗಿ ರಚಿಸಿದ ನಿಧಿಗೆ ಲೇಖಕರು ನೀಡಿದರು.ಡೊನಿ ಕೊರೆಯಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News