ಮಂಗಳೂರು: ಫೆ. 22ರಂದು ಹುತಾತ್ಮರಿಗೆ ಗೌರವ ಶ್ರದ್ಧಾಂಜಲಿ

Update: 2019-02-20 17:41 GMT

ಮಂಗಳೂರು, ಫೆ.20: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಇತ್ತೀಚೆಗೆ ನಡೆದ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು ಬಿ-ಹ್ಯೂಮನ್ ಡಾಟ್ ಆರ್ಗ್ ಹಾಗೂ ಹಿದಾಯ ಫೌಂಡೇಶನ್‌ ಸಹಯೋಗದಲ್ಲಿ ಫೆ. 22ರಂದು ಸಂಜೆ 6:30ಕ್ಕೆ ನಗರದ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಹುತಾತ್ಮರಿಗೆ ಗೌರವ ಸಲ್ಲಿಸುವ ಸಮಾರಂಭಕ್ಕೆ ಎಲ್ಲ ಸಮುದಾಯಗಳ ಸದಸ್ಯರು ಹಾಗೂ ಸಂಘಟನೆಗಳ ಸದಸ್ಯರಿಗೆ ಮುಕ್ತ ಆಹ್ವಾನ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News