''ಬೆಂಕಿ ಆಕಸ್ಮಿಕ ಪೂರ್ಣ ನಿಯಂತ್ರಣದಲ್ಲಿ, ಸಿಟಿ ಸೆಂಟರ್ ಗೆ ಯಾವುದೇ ಹಾನಿ ಇಲ್ಲ''

Update: 2019-02-21 08:53 GMT

ಮಂಗಳೂರು, ಫೆ.21: ಮಂಗಳೂರು ಸಿಟಿ ಸೆಂಟರ್ ಶಾಪಿಂಗ್ ಮಾಲ್ ನಲ್ಲಿ ಉಂಟಾದ ಬೆಂಕಿ ಆಕಸ್ಮಿಕದಲ್ಲಿ ಯಾವುದೇ ರೀತಿಯ ಗಾಯ ನೋವು ಅಥವಾ ಸೊತ್ತಿನ ನಷ್ಟವಾಗಿಲ್ಲ. ತಕ್ಷಣ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು ಕೇವಲ ಹೊಗೆ ಕಟ್ಟಡದ ಕೆಲವೆಡೆ ಹರಡಿತ್ತು. ಅದನ್ನೂ ಈಗ ಸಂಪೂರ್ಣ ನಿಯಂತ್ರಿಸಲಾಗಿದೆ ಎಂದು ಸಿಟಿ ಸೆಂಟರ್ ಆಡಳಿತ 'ವಾರ್ತಾಭಾರತಿ'ಗೆ ತಿಳಿಸಿದೆ. 

ಇಲೆಕ್ಟ್ರಿಕ್ ವೈರಿಂಗ್  ಸಂಬಂಧಿತ  ಸಮಸ್ಯೆಯಿಂದಾಗಿ ಸಣ್ಣ ಬೆಂಕಿ ಆಕಸ್ಮಿಕ ಉಂಟಾಗಿರುವ ಸಾಧ್ಯತೆ ಇದೆ. ಈ ಬಗ್ಗೆ ಸಮಗ್ರ ಪರಿಶೀಲನೆ ಮಾಡಲಾಗಿದೆ.  ಕಟ್ಟಡದಲ್ಲಿ ಹೊಗೆ ಹರಡಿದ್ದ ಜಾಗಗಳನ್ನು ಸ್ವಚ್ಛಗೊಳಿಸಲಾಗಿದೆ. ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದ್ದು, ಗ್ರಾಹಕರಿಗೆ ಅಪರಾಹ್ನ 2 ಗಂಟೆಯಿಂದಲೇ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಯಾವುದೇ ರೀತಿಯ ಸುರಕ್ಷತಾ ಸಮಸ್ಯೆ ಸಿಟಿ ಸೆಂಟರ್ ನಲ್ಲಿ ಇಲ್ಲ ಎಂದು ಸಿಟಿ ಸೆಂಟರ್ ನ ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News