ಫೆ. 23: ಮಂಗಳೂರಿನಲ್ಲಿ ಇಸ್ಕಾನ್ ರಥ ಯಾತ್ರೆ
Update: 2019-02-21 16:53 GMT
ಮಂಗಳೂರು, ಫೆ. 21: ಅಂತರ್ ರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘದ ವತಿಯಿಂದ ಶ್ರೀಕೃಷ್ಣ ಬಲರಾಮ ಮಂದಿರ ಇಸ್ಕಾನ್ ಮಂಗಳೂರು ಇವರ 16ನೆ ವರ್ಷದ ರಥಯಾತ್ರೆ ಫೆ.23ರಂದು ಸಂಜೆ 4.30ಕ್ಕೆ ಉದ್ಘಾಟನೆಗೊಂಡು ಶ್ರೀ ವೆಂಕಟರಮಣ ದೇವಸ್ಥಾನದ ಬಳಿಯಿಂದ ರಥೋತ್ಸವ ಆರಂಭಗೊಂಡು ನಗರದ ಪ್ರದಕ್ಷಿಣೆಯ ಬಳಿಕ ವೆಂಕಟರಮಣ ದೇವಸ್ಥಾನದ ಬಳಿ ರಾತ್ರಿ 8.45ಕ್ಕೆ ಸಮಾರೋಪ ಗೊಳ್ಳಲಿದೆ ಎಂದು ಇಸಕನ್ ಅಕ್ಷಯ ಪಾತ್ರ ಫೌಂಡೇಶನ್ನಿನ ಅಧ್ಯಕ್ಷ ಕಾರುಣ್ಯ ಸಾಗರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸನದಾನ ದಾಸ, ಸುಧಾಕರ ರಾವ್ ಪೇಜಾವರ ಮೊದಲಾದವರು ಉಪಸ್ಥಿತರಿದ್ದರು.