‘ಉಡುಪಿ-ಮಣಿಪಾಲ ದೃಶ್ಯ ಕಾವ್ಯ ಚಿತ್ರ’ ಕೃತಿ ಬಿಡುಗಡೆ

Update: 2019-02-22 15:45 GMT

ಉಡುಪಿ, ಫೆ.22: ಮಣಿಪಾಲ ಯುನಿವರ್ಸಲ್ ಪ್ರೆಸ್ ವತಿಯಿಂದ ಪ್ರಕಟಿಸಲಾದ ಛಾಯಾಚಿತ್ರ ಪತ್ರಕರ್ತ ಅಸ್ಟೋ ಮೋಹನ್ ಅವರ ‘ಉಡುಪಿ- ಮಣಿಪಾಲ ದೃಶ್ಯ ಕಾವ್ಯ ಚಿತ್ರ’ ಕೃತಿಯನ್ನು ಮಣಿಪಾಲ ಮಿಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಸತೀಶ್ ಯು.ಪೈ ಶುಕ್ರವಾರ ಮಣಿಪಾಲದ ಮಣ್ಣಪಳ್ಳದಲ್ಲಿರುವ ನಿರ್ಮಿತಿ ಕೇಂದ್ರದಲ್ಲಿ ಬಿಡುಗಡೆಗೊಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮಾಹೆ ಕುಲಪತಿ ಡಾ.ವಿನೋದ್ ಭಟ್ ಮಾತನಾಡಿ, ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಅವುಗಳನ್ನು ಬಳಸಿಕೊಳ್ಳುವ ಕೆಲಸ ಆಗಬೇಕಾಗಿದೆ. ಐತಿಹಾಸಿಕ, ಸಾಂಸ್ಕೃತಿಕ, ಪಾರಂಪರಿಕ ಸ್ಥಳಗಳು ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಇವೆ ಎಂದು ಹೇಳಿದರು.

ಮಣಿಪಾಲ ಯುನಿವರ್ಸಲ್ ಪ್ರೆಸ್‌ನ ಮುಖ್ಯ ಸಂಪಾದಕಿ ಡಾ.ನೀತಾ ಇನಾಂದಾರ್ ಉಪಸ್ಥಿತರಿದ್ದರು. ಅರ್ಜುನ್ ಸ್ವಾಗತಿಸಿದರು. ಕೃತಿಕಾರ ಅಸ್ಟ್ರೋ ಮೋಹನ್ ವಂದಿಸಿದರು.

ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಾದ ಮಣಿನಾಲ್ಕೂರು ಅವರಿಂದ ಸಂಗೀತ ಕಾರ್ಯಕ್ರಮ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News