ಕಾರ್ಕಳ: ಮೈಲುತುತ್ತು ತಿಂದು ಮಹಿಳೆ ಮೃತ್ಯು
Update: 2019-02-22 15:50 GMT
ಕಾರ್ಕಳ, ಫೆ.22: ಅಡಿಕೆ ತೋಟಕ್ಕೆ ತಂದಿಟ್ಟ ಮೈಲುತುತ್ತನ್ನು ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಲ್ಲೂರು ಗ್ರಾಮದ ಬಂಟೋನಿ ಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಬಂಟೋನಿ ನಿವಾಸಿ ರಾಜು ಪೂಜಾರಿ ಎಂಬವರ ಪತ್ನಿ ಮೀನು ಪೂಜಾರಿ (70) ಎಂದು ಗುರುತಿಸಲಾಗಿದೆ.
ಇವರು ಬೆಳಗ್ಗೆ ಅಡಿಕೆ ತೋಟಕ್ಕೆ ತಂದಿಟ್ಟ ಮೈಲುತುತ್ತನ್ನು ತಿಂದಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ಇವರು ಮಧ್ಯಾಹ್ನ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಕಾರ್ಕಳ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.