ದ.ಕ.ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ವರ್ಗಾವಣೆ

Update: 2019-02-22 17:47 GMT

ಮಂಗಳೂರು, ಫೆ. 22: ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ದ.ಕ.ಜಿಲ್ಲೆಯ ಕೆಲವು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಅವರನ್ನು ಮಂಗಳೂರು ಎಸಿಬಿ ಎಸ್ಪಿಯಾಗಿ, ಮಂಗಳೂರು ನಗರ ಕೇಂದ್ರ ಉಪವಿಭಾಗದ ಎಸಿಪಿ ಭಾಸ್ಕರ ಒಕ್ಕಲಿಗ ಅವರನ್ನು ಮಂಗಳೂರು ವಲಯ ಸಿಐಡಿಗೆ, ಮೈಸೂರು ಸಿಸಿಬಿ ಡಿವೈಎಸ್ಪಿಲಿಂಗಪ್ಪಆರ್. ಅವರನ್ನು ಪಶ್ಚಿಮ ವಲಯ ಐಜಿಪಿ ಕಚೇರಿಗೆ, ಪೂರ್ವ ವಲಯ ಐಜಿಪಿ ಕಚೇರಿಯ ಡಿವೈಎಸ್ಪಿ ನಟರಾಜ್ ಎಂ.ಎ. ಅವರನ್ನು ದ.ಕ.ಜಿಲ್ಲಾ ಡಿಸಿಆರ್‌ಬಿಗೆ, ಪುತ್ತೂರು ಡಿವೈಎಸ್ಪಿ ದಿನಕರ ಶೆಟ್ಟಿ ಅವರನ್ನು ಸೋಮವಾರ ಪೇಟೆ ಉಪ ವಿಭಾಗಕ್ಕೆ, ಮಂಗಳೂರು ಎಸಿಬಿ ಡಿವೈಎಸ್ಪಿ ಸುಧೀರ್ ಹೆಗ್ಡೆ ಅವರನ್ನು ಮಂಗಳೂರು ನಗರ ಸೆಂಟ್ರಲ್ ಎಸಿಪಿಯಾಗಿ, ಮೈಸೂರು ನಗರ ಡಿಸಿಪಿ ಡಾ.ಅಮ್ಟೆ ವಿಕ್ರಂ ಅವರನ್ನು ದ.ಕ.ಜಿಲ್ಲಾ ಹೆಚ್ಚುವರಿ ಎಸ್ಪಿಯಾಗಿ ವರ್ಗಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News