ಹೊಳೆಯಲ್ಲಿ ಮುಳುಗಿ ಮೀನುಗಾರ ಮೃತ್ಯು

Update: 2019-02-23 16:43 GMT

ಕುಂದಾಪುರ, ಫೆ. 23: ಹೊಳೆಯಲ್ಲಿ ದೋಣಿ ಮೂಲಕ ಮೀನು ಹಿಡಿ ಯುತ್ತಿದ್ದ ಮೀನುಗಾರರೊಬ್ಬರು ಅಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಕುಂದಾಪುರ ಹಳೆ ಆದರ್ಶ ಆಸ್ಪತ್ರೆ ಎದುರಿನ ನಿವಾಸಿ ಕೃಷ್ಣ (55) ಎಂದು ಗುರುತಿಸಲಾಗಿದೆ.

ಫೆ. 22ರಂದು ಬೆಳಗಿನ ಜಾವ ದೋಣಿಯಲ್ಲಿ ಮೀನು ಹಿಡಿಯಲು ಹೋದ ಇವರು ನಾಪತ್ತೆಯಾಗಿದ್ದರು. ಬೆಳಗ್ಗೆ 9ಗಂಟೆಗೆ ಮಂಗಲಪಾಂಡ್ಯ ರಸ್ತೆಯ ತುದಿಯ ಹೊಳೆಯಲ್ಲಿ ಅವರ ದೋಣಿ ಪತ್ತೆ ಯಾಗಿತ್ತು. ಫೆ.23ರಂದು ಬೆಳಗ್ಗೆ 11:30ಕ್ಕೆ ಭಗತ್‌ಸಿಂಗ್ ರಸ್ತೆಯ ಮಠದಬೆಟ್ಟು ಎಂಬಲ್ಲಿರುವ ನದಿಯಲ್ಲಿ ಇವರ ಮೃತದೇಹ ಪತ್ತೆಯಾಯಿತು.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News