ಮಂಗಳೂರು: ಶಸ್ತ್ರಚಿಕಿತ್ಸೆಯಿಂದ ಯುವಕನಿಗೆ ಹೆಬ್ಬೆರಳು ಮರುಜೋಡಣೆ

Update: 2019-02-23 17:28 GMT

ಮಂಗಳೂರು, ಫೆ.23: ಒಂದು ವರ್ಷದ ಹಿಂದೆ ಅಪಘಾತದಲ್ಲಿ ತನ್ನ ಹೆಬ್ಬೆರಳು ಕಳೆದುಕೊಂಡಿದ್ದ ಯುವಕನೊಬ್ಬನಿಗೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಹೆಬ್ಬೆರಳು ಮರುಜೋಡಣೆ ನಡೆಸಲಾಯಿತು.

ಡ್ರೈವರ್ ವೃತ್ತಿಯಲ್ಲಿರುವ ಯುವಕನೊಬ್ಬನಿಗೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೆಬ್ಬೆರಳನ್ನು ಮರುಜೋಡಣೆ ಮಾಡಲಾಯಿತು. ಆಸ್ಪತ್ರೆಯ ಮೂಳೆ ವಿಭಾಗದ ಕೈ ಮತ್ತು ಮೈಕ್ರೋಸರ್ಜರಿ ವಿಭಾಗ ಯುವಕನ ದೈನಂದಿನ ಕೆಲಸಕ್ಕೆ ಮರುಜೀವ ಕೊಟ್ಟಂತಾಗಿದೆ.

ಸತತ ಏಳು ಗಂಟೆಗಳ ಶಸ್ತ್ರಚಿಕಿತ್ಸೆಯಲ್ಲಿ ಯುವಕನ ಕಾಲಿನ ಹೆಬ್ಬೆರಳು ತೆಗೆದು ಕೈಗೆ ಜೋಡಿಸಲಾಗಿದೆ. ಈ ಅಪರೂಪದ ಚಿಕಿತ್ಸೆಯಲ್ಲಿ ಯುನಿಟ್ ಮುಖ್ಯಸ್ಥ ಕೈ ಮತ್ತು ಮೈಕ್ರೋಸರ್ಜರಿ ವಿಭಾಗದ ಡಾ.ಲತೀಶ್ ಲಿಯೋ, ಡಾ.ಸಾಗರ್ ಎಸ್., ಡಾ.ಹಿಲ್ಡಾ ಹಾಗೂ ಇತರ ಸಹಾಯಕ ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News