×
Ad

ಬಡಾಕೆರೆ ದೇವಸ್ಥಾನದಲ್ಲಿ ಆತ್ಮಹತ್ಯೆ

Update: 2019-02-25 22:12 IST

ಬೈಂದೂರು, ಫೆ.25: ಬಡಾಕೆರೆ ಗ್ರಾಮದ ಶ್ರೀಲಕ್ಷ್ಮೀ ಜನಾರ್ದನ ದೇವ ಸ್ಥಾನದಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.24ರಂದು ಸಂಜೆ ವೇಳೆ ನಡೆದಿದೆ.

ಮೃತರನ್ನು ಬಡಾಕೆರೆಯ ಸುಬ್ರಹ್ಮಣ್ಯ ಅಡಿಗ(27) ಎಂದು ಗುರುತಿಸಲಾ ಗಿದೆ.

ಇವರು ದೇವಸ್ಥಾನದ ದಕ್ಷಿಣ ಭಾಗದ ಹೋಮ ಕುಂಡದ ಹತ್ತಿರ ಒಳ ಭಾಗದ ಸುತ್ತು ಪೌಳಿಯ ಮರದ ಅಡ್ಡೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News