ರೆಡ್‌ಕ್ರಾಸ್ ಚುನಾವಣೆ: ಶಾಂತರಾಮ ಶೆಟ್ಟಿ ತಂಡ ಜಯಭೇರಿ

Update: 2019-02-25 17:24 GMT
ಶಾಂತರಾಮ ಶೆಟ್ಟಿ

ಮಂಗಳೂರು, ಫೆ.25: ಪ್ರತಿಷ್ಠಿತ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಚುನಾವಣೆಯಲ್ಲಿ ಶಾಂತರಾಮ ಶೆಟ್ಟಿಯವರ ತಂಡ ಜಯಭೇರಿ ಬಾರಿಸಿದ್ದು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದ.ಕ. ಶಾಖೆಯ 2018-22 ಸಾಲಿನ ಆಡಳಿತ ಮಂಡಳಿಗೆ ಶಾಂತರಾಮ ಶೆಟ್ಟಿ ಸಾರಥ್ಯದಲ್ಲಿ 10 ಜನರು ಆಯ್ಕೆಯಾಗಿದ್ದಾರೆ.

ರೆಡ್‌ಕ್ರಾಸ್ ಸಂಸ್ಥೆಗೆ ರವಿವಾರ ಚುನಾವಣೆ ನಡೆದಿತ್ತು. ಆಡಳಿತ ಮಂಡಳಿಯ 10 ಸ್ಥಾನಗಳಿಗೆ 16 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ರೆಡ್‌ಕ್ರಾಸ್ ಕಚೇರಿಯಲ್ಲಿ ಸೋಮವಾರ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡು ಫಲಿತಾಂಶ ಪ್ರಕಟಿಸಲಾಗಿದೆ.

ಆಯ್ಕೆಯಾದ 10 ಅಭ್ಯರ್ಥಿಗಳು ಮತ:
* ಶಾಂತರಾಮ ಶೆಟ್ಟಿ- 710 (ಚಾರ್ಟರ್ಡ್ ಅಕೌಂಟೆಂಟ್)
* ಡಾ.ಸತೀಶ್ ಭಂಡಾರಿ- 676 (ವೈದ್ಯ)
* ಯತೀಶ್ ಬೈಕಂಪಾಡಿ-661 (ಪಣಂಬೂರು ಬೀಚ್ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಸಿಇಒ)
* ಡಾ.ಯು.ವಿ.ಶೆಣೈ- 660 (ವೈದ್ಯ)
* ರವೀಂದ್ರ ಶೆಟ್ಟಿ- 651 (ಪತ್ರಕರ್ತ)
* ರವೀಂದ್ರನಾಥ್ ಕೆ.- 643 (ವಿಜಯಾ ಬ್ಯಾಂಕ್ ನಿವೃತ್ತ ಅಧಿಕಾರಿ)
* ನಿತ್ಯಾನಂದ ಶೆಟ್ಟಿ- 639 (ಉದ್ಯಮಿ)
* ಆರ್ಚಿ ಬಾಲ್ಡ ಮೆನಸಸ್- 607 (ನಿವೃತ್ತ ಬ್ಯಾಂಕರ್ ಮತ್ತು ಉದ್ಯಮಿ)
* ಯುಜಿನ್ ರೆಂಟ್- 605 (ಉದ್ಯಮಿ)
* ಸಚೇತ್ ಸುವರ್ಣ- 592 (ಉಪನ್ಯಾಸಕ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News