×
Ad

ಅಲ್ಪವ್ಯಾಪ್ತಿಯ ತುರ್ತು ಪ್ರತಿಕ್ರಿಯೆ ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆಸಿದ ಭಾರತ

Update: 2019-02-26 21:11 IST

ಭುವನೇಶ್ವರ,ಫೆ.26: ಭಾರತೀಯ ಸೇನೆಗೆ ಮತ್ತಷ್ಟು ಬಲತುಂಬುವ ದೃಷ್ಟಿಯಿಂದ ಭಾರತ ಮಂಗಳವಾರ ಅಲ್ಪವ್ಯಾಪ್ತಿಯ ತುರ್ತು ಪ್ರತಿಕ್ರಿಯೆಯ ಕ್ಷಿಪಣಿ (ಕ್ಯೂಆರ್‌ಎಸ್‌ಎಎಂ)ಯ ಯಶಸ್ವಿ ಪರೀಕ್ಷೆ ನಡೆಸಿತು. ಈ ಮಾದರಿಯ ಎರಡು ಕ್ಷಿಪಣಿಗಳನ್ನು ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಒಡಿಶಾದ ಬಾಲಸೋರ್ ಜಿಲ್ಲೆಯ ಚಾಂದಿಪುರ ಪರೀಕ್ಷಾ ನೆಲೆಯಿಂದ ಪರೀಕ್ಷಾರ್ಥವಾಗಿ ಉಡಾಯಿಸಿತು.

ಬೇಕಾದ ದಿಕ್ಕಿಗೆ ತಿರುಗುವಂತಹ ಹಾರಟ ವಿಭಾಗವನ್ನು ಹೊಂದಿರುವ ಟ್ರಕ್ ಮೇಲಿಂದ ಈ ಕ್ಷಿಪಣಿಗಳನ್ನು ಉಡಾಯಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂವತ್ತು ಕಿ.ಮೀ ದೂರದವರೆಗಿನ ಗುರಿಗಳನ್ನು ತಲುಪುವ ಕ್ಯೂಆರ್‌ಎಸ್‌ಎಎಂ ಆಕಾಶದಲ್ಲಿ ಹಾರುವ ಗುರಿಗಳು, ಟ್ಯಾಂಕ್‌ಗಳು ಮತ್ತು ಬಂಕರ್‌ಗಳನ್ನು ಪುಡಿಗೈಯ್ಯುವ ಸಾಮರ್ಥ್ಯ ಹೊಂದಿದೆ. ದೇಸೀಯ ಕ್ಯೂಆರ್‌ಎಸ್‌ಎಎಂನ ಯಶಸ್ವಿ ಪರೀಕ್ಷೆ ನಡೆಸಿರುವ ಡಿಆರ್‌ಡಿಒವನ್ನು ರಕ್ಷಣಾ ಸಚಿವಾಲಯ ಅಭಿನಂದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News