ಮಾ.5: ಯುನಿವೆಫ್ ಕರ್ನಾಟಕ ಕೃಷ್ಣಾಪುರ ಶಾಖೆ ಉದ್ಘಾಟನೆ

Update: 2019-03-04 12:20 GMT

ಮಂಗಳೂರು : 'ಸಬಲೀಕೃತ ಸಧೃಢ ಸಮುದಾಯಕ್ಕಾಗಿ ಹಾಗೂ ಸುಶಿಕ್ಷಿತ ಸುರಕ್ಷಿತ ಸಚ್ಚರಿತ ಸಮಾಜಕ್ಕಾಗಿ' ಎಂಬ ಧ್ಯೇಯ ವಾಕ್ಯದೊಂದಿಗೆ ಯುನಿವೆಫ್ ಕರ್ನಾಟಕ “ಬದಲಾವಣೆಗಾಗಿ ನಾನು” ಎಂಬ ಸದಸ್ಯತ್ವ ಅಭಿಯಾನವನ್ನು ಮಾರ್ಚ್ 1 ರಿಂದ ಹಮ್ಮಿಕೊಂಡಿದ್ದು, ಅದರ ಕೃಷ್ಣಾಪುರ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ಮಾರ್ಚ್ 5 ರ ಮಂಗಳವಾರ ಸಂಜೆ 7 ಕ್ಕೆ ಕೃಷ್ಣಾಪುರ ಪ್ಯಾರಡೈಸ್ ಕ್ಲಬ್ ನಲ್ಲಿ ಜರಗಲಿದೆ.

ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಆಸಕ್ತರು ಈ  ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಅಭಿಯಾನ ಸಂಚಾಲಕ ಹುದೈಫ್ ಕುದ್ರೋಳಿ ಕರೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9964129116, 9845199931 ನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News