ಕೊಕ್ಕಡ ಯುವ ಕಾಂಗ್ರೆಸ್ ಪ್ರಾಯೋಜಕತ್ವದಲ್ಲಿ ಕಬಡ್ಡಿ ಪಂದ್ಯಾಟ
ಬೆಳ್ತಂಗಡಿ: ಯುವ ಕಾಂಗ್ರೆಸ್ ಕೊಕ್ಕಡದ ಪ್ರಾಯೋಜಕತ್ವದಲ್ಲಿ ದ.ಕ. ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಜಿಲ್ಲೆಯ 16 ಆಹ್ವಾನಿತ ತಂಡಗಳ ಪ್ರೋ ಮಾದರಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ "ಇಂದಿರಾ ಗಾಂಧಿ ಟ್ರೋಫಿ 2019 " ಕೊಕ್ಕಡದ ಸಂತ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ನಡೆಯಿತು.
ಕರ್ನಾಟಕ ಸರಕಾರದ ಮಾಜಿ ಮುಖ್ಯ ಸಚೇತಕ ವಸಂತ ಬಂಗೇರ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜದ ಯುವ ಪೀಳಿಗೆಯ ಸಂಘಟನೆಗೆ ಇಂತಹ ಕ್ರೀಡಾಕೂಟಗಳು ಸ್ಪೂರ್ತಿಯಾಗಿದೆ. ನಮ್ಮ ದೇಶದ ಕಬಡ್ಡಿ ಕ್ರೀಡಾಪಟುಗಳು ಅಂತರಾಷ್ಟ್ರೀಯ ಮಟ್ಟಕ್ಕೆ ಈ ಕ್ರೀಡೆಯಲ್ಲಿ ಸಾಧನೆ ಗೈದಿದ್ದು ಸ್ಥಳೀಯ ಯುವ ಸಂಘಟನೆ ಇಂತಹ ಅಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಹೆಮ್ಮೆಯಾಗಿದೆ ಎಂದರು. ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿದರು.
ದ.ಕ. ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ,ಬೆಳ್ತಂಗಡಿ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಕಿಣಿ, ಬೆಳ್ತಂಗಡಿ ಎ.ಪಿ.ಎಂ.ಸಿ ಅಧ್ಯಕ್ಷ ಕೇಶವ ಗೌಡ ಬೆಳಾಲು, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ ಕಾಮತ್, ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸಿಫ್, ಸುರತ್ಕಲ್ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆಳ್ವ, ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಎ.ಸಿ. ಜಯರಾಜ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಶಬೀರ್ ಕೆಂಪಿ, ಬೆಳ್ತಂಗಡಿಯ ಉದ್ಯಮಿ ವಿಜಯ್ ಫೆರ್ನಾಂಡೀಸ್, ತಾಲೂಕು ಎನ್.ಎಸ್.ಯು.ಐ ಅಧ್ಯಕ್ಷ ಪವನ್ ಸಾಲಿಯಾನ್ ಕೊಲ್ಲಾಜೆ, ಧರ್ಮಸ್ಥಳ ಪೋಲೀಸ್ ಠಾಣಾಧಿಕಾರಿ ಅವಿನಾಶ್, ಪ್ರಜ್ವಲ್ ಕುಮಾರ್ ಕೊಕ್ಕಡ, ಮಾತನಾಡಿದರು.
ಕರ್ನಾಟಕ ರಾಜ್ಯ ಇಂಟಕ್ ಕಾರ್ಯದರ್ಶಿ ನಝೀರ್ ಮಠ, ಕಡಬ ಜಿಲ್ಲಾ ಪಂ. ಸದಸ್ಯ ಪಿ.ಪಿ. ವರ್ಗೀಸ್, ನೆಲ್ಯಾಡಿ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ಕೆ.ಪಿ.ಸಿ.ಸಿ. ಸದಸ್ಯ ಕೆ.ಪಿ. ತೋಮಸ್, ಕಾರ್ಮಿಕ ಸಂಘಟನೆ ಮುಖಂಡ ಬಿ.ಎಂ.ಭಟ್, ನ್ಯಾಯವಾದಿ ಮನೋಹರ್ ಇಳಂತಿಲ, ಕೌಕ್ರಾಡಿ ಗ್ರಾ.ಪಂ. ಅಧ್ಯಕ್ಷ ಇಬ್ರಾಹಿಂ, ಕೊಕ್ಕಡ ಗ್ರಾ.ಪಂ. ಅಧ್ಯಕ್ಷ ವಿ.ಜೆ. ಸೆಬಾಸ್ಟಿಯನ್, ಅನಿಲ್ ಪೈ ಬೆಳ್ತಂಗಡಿ, ಕೊಕ್ಕಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಗೌಡ, ಕಾರ್ಯದರ್ಶಿ ಜಾರಪ್ಪ ಗೌಡ, ಕೊಕ್ಕಡ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಕೆ. ಹಕೀಂ, ಕೊಕ್ಕಡ ಗ್ರಾ.ಪಂ. ಸದಸ್ಯೆ ಸಿನಿ ಗುರುದೇವನ್, ಶ್ರೀ ಕ್ಷೇತ್ರ ಸೌತಡ್ಕ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಕೊಕ್ಕಡ ವೈದ್ಯನಾಥೇಶ್ವರ ದೇವಸ್ಥಾನದ ಅಧ್ಯಕ್ಷ ವಸಂತ ರಾವ್, ಕೊಕ್ಕಡ, ಮುಸ್ತಾಫಾ ಮಲ್ಲಿಗೆ ಮಜಲು, ಅಬ್ದುಲ್ ಸಲಾಂ ಕೊಕ್ಕಡ, ಗಿರೀಶ್ ಮಹಾವೀರ ಕಾಲನಿ, ಸುಳ್ಯ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಇಸ್ಮಾಯಿಲ್, ಪಕ್ಷದ ಪದಾಧಿಕಾರಿಗಳಾದ ಶರೀಫ್ ಬೋಳದಬೈಲು, ಇಸ್ಮಾಯಿಲ್ ರಾಜಲಕ್ಷ್ಮೀ, ಮುನೀರ್ ಎಂ. ಎಚ್., ಹೈದರ್ ಎಂ.ಎಸ್, ಅಶ್ರಫ್ ಎ, ಮಾಜಿ ಸೈನಿಕ ರವೀಂದ್ರ ಗೌಡ, ಎಂ. ಎಚ್. ಮಹಮ್ಮದ್ ಖಲಂದರ್, ಪ್ರಜ್ವಲ್ ಕುಮಾರ್, ಫಾರೂಕ್ ಮಡೆಂಜೋಡಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರುಗಳಾದ ಜಿ. ದೇವಪ್ಪ ಗೌಡ ಗುಂಡಿಮನೆ, ಅನಿರುದ್ದನ್ ,ಕೊಕ್ಕಡದ ನಾಟಿ ವೈದ್ಯರುಗಳಾದ ಮೋಹಿನಿ ಅಕ್ಕ ಕೊಪ್ಪಳಕೋಡಿ, ಕಲ್ಯಾಣಿ ಅಕ್ಕ ಹಳ್ಳಿಂಗೇರಿ, ಕೃಷ್ಣ ದೇವಾಡಿಗ, ಕೊಕ್ಕಡ ಸಂಗಮ್ ತಂಡದ ಮಾಜಿ ಆಟಗಾರರುಗಳಾದ ಜಗದೀಶ್ ಗೌಡ ಬಿ.ಎಂ., ರಾಜೇಂದ್ರ ಸಂಗಮ್, ರಾಜಗೋಪಾಲ್ ಬೆನಕ, ರಾಜ್ಯಮಟ್ಟದ ಆಟಗಾರ ನಿಝಾರ್ ಅಹ್ಮದ್ ಇವರುಗಳನ್ನು ಸನ್ಮಾನಿಸಲಾಯಿತು.