ರಿಕ್ಷಾ ಢಿಕ್ಕಿ: ಗಾಯಾಳು ಮಹಿಳೆ ಮೃತ್ಯು

Update: 2019-03-06 16:17 GMT

ಉಡುಪಿ, ಮಾ.6: ಕಳೆದ ಸೋಮವಾರ ಮುಂಜಾನೆ ಕಡಿಯಾಳಿ ಮುಖ್ಯ ರಸ್ತೆಯನ್ನು ದಾಟುವಾಗ ರಿಕ್ಷಾ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ಕಡಿಯಾಳಿಯ ಗೀತಾ ಶೆಟ್ಟಿ (45) ಮೃತಪಟ್ಟ ಮಹಿಳೆ. ಇವರು ಸೋಮವಾರ ಬೆಳಿಗ್ಗೆ 6:15ರ ಸಮಾರಿಗೆ ಕಡಿಯಾಳಿ ದೇವಸ್ಥಾನಕ್ಕೆ ಹೋಗಲು ರಸ್ತೆ ದಾಟುವಾಗ ವೇಗವಾಗಿ ಬಂದ ರಿಕ್ಷಾ ಢಿಕ್ಕಿ ಹೊಡೆದಿತ್ತು. ಕೃಷಿಕರಾಗಿದ್ದ ಇವರು ಪತಿ ಶಿವರಾಮ ಶೆಟ್ಟಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News