ಆಯುಕ್ತರಿಂದ ಪೊಲೀಸರ ಅಹವಾಲು ಸ್ವೀಕಾರ

Update: 2019-03-06 17:04 GMT

ಮಂಗಳೂರು, ಮಾ.6: ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಪೊಲೀಸರ ಅಹವಾಲು ಸ್ವೀಕಾರ ಬುಧವಾರ ನಡೆಯಿತು.

ಪ್ರತಿ ಪೊಲೀಸ್ ಠಾಣೆಯಿಂದ ಓರ್ವ ಪೊಲೀಸ್ ಸಿಬ್ಬಂದಿಯನ್ನು ಆಹ್ವಾನಿಸಲಾಗಿತ್ತು. ವೇತನ ಹೆಚ್ಚಳ, ವೇತನ ತಾರತಮ್ಯ, ವಸತಿ ಗೃಹ ಮೊದಲಾದ ಸಮಸ್ಯೆಗಳಿಗೆ ಸಂಬಂಧಿಸಿ ಪೊಲೀಸರು ಅಹವಾಲು ಸಲ್ಲಿಸಿದರು.

ಅಹವಾಲು ಸ್ವೀಕರಿಸಿ ಮಾತನಾಡಿದ ಪೊಲೀಸ್ ಆಯುಕ್ತರು, ತನ್ನ ಹಂತದಲ್ಲಿ ಪರಿಹಾರ ಆಗುವ ಕೆಲಸಗಳಿಗೆ ತಕ್ಷಣ ಸ್ಪಂದಿಸಲಾಗುವುದು. ಕೆಲವೊಂದು ನಿರ್ಧಾರಗಳು ಸರಕಾರದ ಹಂತದಲ್ಲಿ ಆಗಬೇಕಾಗಿದ್ದು, ಸಂಬಂಧ ಪಟ್ಟವರ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News