ಗಿಳಿಯಾರು: ಅರಣ್ಯಕ್ಕೆ ಬೆಂಕಿ

Update: 2019-03-07 14:59 GMT

ಕೋಟ, ಮಾ.7: ದಿನದಿಂದ ದಿನಕ್ಕೆ ಬಿಸಿಲ ಧಗೆ ಹೆಚ್ಚುತ್ತಿರುವ ಉರಿ ಬೇಸಿಗೆ ಯಲ್ಲಿ ಜಿಲ್ಲೆಯ ಅಲ್ಲಲ್ಲಿ ಅರಣ್ಯಗಳು ಬೆಂಕಿಯ ಕೆನ್ನಾಲಿಗೆ ತುತ್ತಾಗುತ್ತಿರುವ ವರದಿಗಳು ಬರುತ್ತಿವೆ.

ಜಿಲ್ಲೆಯ ಕೋಟ ಸಮೀಪದ ಗಿಳಿಯಾರು ಗ್ರಾಮದ ಭಾಸ್ಕರ ಶೆಟ್ಟಿ ಅವರ ಗೇರು ತೋಟಕ್ಕೆ ಬೆಂಕಿ ತಗಲಿದೆ. ಒಣ ಸೌದೆ, ತರಗೆಲೆಗಳಿಗೆ ಹಬ್ಬಿದ ಬೆಂಕಿ ತೋಟದ ತುಂಬಾ ಹರಡಿತ್ತು. ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸ ಪಟ್ಟರು. ಬೆಂಕಿಯ ಕೆನ್ನಾಲಿಗೆಗೆ ನೂರಾರು ಗೇರುಮರಗಳು ಆಹುತಿಯಾಗಿವೆ. ಸ್ಥಳಕ್ಕೆ ಆಗಮಿಸಿದ ಕುಂದಾಪುರ ವಿಭಾಗದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News