ಸಾಮಾಜಿಕ ಧುರೀಣ ವಿಷ್ಣು ಬಿ. ಶೆಟ್ಟಿಗಾರ್ ನಿಧನ

Update: 2019-03-08 14:55 GMT

ಉದ್ಯಾವರ, ಮಾ.8: ಸ್ಥಳೀಯ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್‌ನ ಮಾಜಿ ಪ್ರಧಾನ ಕಾರ್ಯದರ್ಶಿ, ಹಾಲಿ ಆಂತರಿಕ ಲೆಕ್ಕ ಪರಿಶೋಧಕರಾಗಿರುವ ಸಾಮಾಜಿಕ ಧುರೀಣ ವಿಷ್ಣು ಬಿ. ಶೆಟ್ಟಿಗಾರ್ (63) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಉದ್ಯಾವರದ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಇವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಉದ್ಯಾವರ ಟೈಲರ್ಸ್‌ ಅಸೋಸಿಯೇಶನ್‌ನ ಮಾಜಿ ಕೋಶಾಧಿಕಾರಿ, ನವೋದಯ ಸ್ವಸಹಾಯ ಸಂಘ ಉದ್ಯಾವರ ಒಕ್ಕೂಟದ ಕೋಶಾಧಿಕಾರಿ, ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಹಾಗೂ ಸುರತ್ಕಲ್ ಪಧ್ಮಶಾಲಿ ಸಂಘದ ಸಕ್ರಿಯ ಸದಸ್ಯರಾಗಿ ದಿೀರ್ಘಕಾಲ ಸೇವೆಯನ್ನು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News