ಪ್ರೀತಿ, ವಿಶ್ವಾಸದಿಂದ ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯ: ಈಶವಿಠಲದಾಸ ಸ್ವಾಮೀಜಿ

Update: 2019-03-10 06:44 GMT

ಪಡುಬಿದ್ರೆ : ವಿವಿಧ ಜಾತಿ, ಧರ್ಮದ ಜನರು ಪರಸ್ಪರ ಪ್ರೀತಿ, ವಿಶ್ವಾಸದೊಂದಿಗೆ ಬದುಕುವುದರಿಂದ ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ ಎಂದು ಕೇಮಾರು ಮಠದ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.

ಶನಿವಾರ ರಾತ್ರಿ ಎರ್ಮಾಳಿನ ಜಾಮಿಯಾ ಮಸೀದಿ ಹಝ್ರತ್ ಫೀರ್ ಯೂಸುಫ್ ಖಾನ್ ಷಾ ವಲಿಯುಲ್ಲಾಹಿ ದರ್ಗಾದ ಉರೂಸ್ ಸಮಾರಂಭದಲ್ಲಿ ನಡೆದ ಸೌಹಾರ್ದ ಸಮ್ಮೇಳನದಲ್ಲಿ ಸೌಹಾರ್ದ ಸಂದೇಶ ನೀಡಿದರು.

ಸಮಾಜವನ್ನು, ಜಗತ್ತನ್ನು ಬದಲಿಸಲು ಯುವಸಮುದಾಯದಿಂದ ಮಾತ್ರ ಸಾಧ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಯುವಸಮುದಾಯವು ಮಾಧಕ ದ್ರವ್ಯಗಳ ವ್ಯಸನಿಗಳಾಗುತಿದ್ದಾರೆ. ಇದರಿಂದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮದ್ಯಪಾನ ಮುಕ್ತ ಸಮಾಜ ನಿರ್ಮಾಣ ಆಗಬೇಕಾಗಿದ್ದು, ಸರ್ಕಾರವು ಈ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದು ಹೇಳಿದರು.

ದಕ ಉಡುಪಿ ಜಿಲ್ಲಾ ಖಾಝಿ ಅಲ್‍ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುವಾ ನೆರವೇರಿಸಿದರು. ದರ್ಗಾ ಸಮಿತಿಯ ಅಧ್ಯಕ್ಷ ಆಸೀಫ್ ಹನ್ನಾನ್ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭ ಅಶೋಕ್ ರಾಜ್ ಎರ್ಮಾಳು ಬೀಡು ಇವರನ್ನು ಸನ್ಮಾನಿಸಲಾಯಿತು. ಶಿರ್ವ ಆರೋಗ್ಯ ಮಾತಾ ದೇವಾಲಯದ ಸಹಾಯಕ ಧರ್ಮಗುರು ರೆ.ಫಾ. ಅಶ್ವಿನಿ ಅರಾನ್ಹಾ, ಸೂರಿಂಜೆ ಮಸೀದಿ ಮುದರ್ರಿಸ್ ಅಸಯ್ಯದ್ ಹಬೀಬುರ್ರಹ್ಮಾನ್ ಫೈಝಿ ತಂಙಳ್, ಮುಹಮ್ಮದ್ ಬಾಖವಿ ಪೂಂಜಾಲಕಟ್ಟೆ ಉಸ್ತಾದ್, ಎರ್ಮಾಳು ಮಸೀದಿ ಖತೀಬ್ ಮುಹಮ್ಮದ್ ಶಬೀರ್ ಫೈಝಿ, ಉಚ್ಚಿಲದ ಜುಮ್ಮಾ ಮಸೀದಿಯ ಖತೀಬ್ ಇಸ್ಹಾಕ್ ಫೈಝಿ, ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಶಾಸಕ ವಿನಯಕುಮಾರ್ ಸೊರಕೆ, ತಾಲ್ಲೂಕು ಪಂ. ಸದಸ್ಯ ಯು.ಸಿ. ಶೇಖಬ್ಬ, ಜುಮಾ ಮಸೀದಿ ಅಧ್ಯಕ್ಷ ಎ.ಕೆ. ಸುಲೈಮಾನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ ಅಡ್ವೆ, ಜಿಲ್ಲಾ ವಕ್ಫ್ ಬೋರ್ಡು ಉಪಾಧ್ಯಕ್ಷ ಗುಲಾಂ ಮುಹಮ್ಮದ್, ತೆಂಕ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಬಾಬು, ದರ್ಗಾ ಸಮಿತಿಯ ಮಾಜಿ ಅಧ್ಯಕ್ಷ ಶರೀಫ್ ಕರಾವಳಿ, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮನ್ಸೂರ್ ಇಬ್ರಾಹಿಂ, ಎಸ್‍ಡಿಪಿಐ ಜಿಲ್ಲಾ ಸಮಿತಿಯ ಹನೀಫ್ ಮೂಳೂರು, ಹಿಂದುಳಿದ ವರ್ಗ ಕಾಪು ಕ್ಷೇತ್ರ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಎರ್ಮಾಳು, ಅಬ್ದುಲ್ ರಹ್ಮಾನ್ ಕನ್ನಂಗಾರ್, ಅಲ್‍ ಇಸ್ಲಾಮಿಯಾ ಯಂಗ್‍ಮೆನ್ಸ್ ಅಧ್ಯಕ್ಷ ನವಾಝ್ ಅಶ್ರಫ್, ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ತವಕ್ಕಲ್, ಎರ್ಮಾಳು ಮಸೀದಿಯ ಮಾಜಿ ಅಧ್ಯಕ್ಷ ಇಬ್ರಾಹಿಂ ಮೊಯ್ದೀನ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್, ಅಲ್‍ಮದ್ರಸತುದ್ದೀನಿಯಾತ್ ಅಧ್ಯಕ್ಷ ಇಜ್ಜಬ್ಬ ಬ್ಯಾರಿ, ಎಸ್‍ಕೆಎಸ್‍ಎಸ್‍ಎಫ್ ಎರ್ಮಾಳು ಶಾಖೆ ಅಧ್ಯಕ್ಷ ನಯಾಝ್ ಎರ್ಮಾಳು, ಉಚ್ಚಿಲ ತವಕ್ಕಲ್ ಯಂಗ್‍ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ರಝಾಕ್ ಮೋನಬ್ಬ ಉಪಸ್ಥಿತರಿದ್ದರು.

ಇರ್ಷಾದ್ ಕನ್ನಂಗಾರ್ ಕಾರ್ಯಕ್ರಮ ನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News