ಉರುವಾಲು ನಿವಾಸಿ ನಾಪತ್ತೆ: ದೂರು

Update: 2019-03-11 17:38 GMT

ಉಪ್ಪಿನಂಗಡಿ: ಉರುವಾಲು ಗ್ರಾಮದ ಮಾಲ್ದಡ್ಕ ನಿವಾಸಿ, ಕುಪ್ಪೆಟ್ಟಿಯಲ್ಲಿ ಹೊಟೇಲ್ ಹೊಂದಿರುವ ಜಯರಾಮ ಬಂಗೇರ (55) ಅವರು ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯರಾಮ ಬಂಗೇರ ಮಾ.10ರಂದು ಬೆಳಗ್ಗೆ 6:30ಕ್ಕೆ ಉರುವಾಲು ಗ್ರಾಮದ ಕುಪ್ಪೆಟ್ಟಿಯಲ್ಲಿರುವ ತನ್ನ  ಹೊಟೇಲ್‍ಗೆ ಹೋದವರು ಬಳಿಕ ಮನೆಗೆ ಬಂದಿಲ್ಲ. ಇವರ ಬಗ್ಗೆ ಸಂಬಂಧಿಕರಲ್ಲಿ, ಪರಿಸರದಲ್ಲಿ ಹುಡುಕಾಡಿದರೂ ಯಾವುದೇ ಮಾಹಿತಿ ಲಭ್ಯವಿಲ್ಲ. ಇವರು ತುಳು, ಕನ್ನಡ, ಮಲಯಾಳ ಭಾಷೆಗಳನ್ನು ಮಾತನಾಡುತ್ತಿದ್ದು, ಮನೆಯಿಂದ ತೆರಳಿದ ಸಂದರ್ಭ ಬಿಳಿ ಅಂಗಿ ಹಾಗೂ ಕೇಸರಿ ಪಂಚೆಯನ್ನು ಧರಿಸಿದ್ದರು ಎಂದು ಅವರ ಪತ್ನಿ  ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News