ಮಾ. 15: ನಿಟ್ಟೆ ವಿವಿ ಪ್ರಾಯೋಜಿತ ತುಳು ಭಾಷಾ ನಿಘಂಟು 'ತುಳು ಜ್ಞಾತಿ' ಪದಕೋಶ ಲೋಕಾರ್ಪಣೆ

Update: 2019-03-12 14:08 GMT

ಉಳ್ಳಾಲ: ತುಳುಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಲ್ಲಿ ಸೇರಿಸುವ ಪ್ರಯತ್ನದಲ್ಲಿ ಭಾಷಾವಿಷಯಕವಾದ ಶಾಸ್ತ್ರಗ್ರಂಥಗಳು ಹಾಗೂ ಪದಕೋಶಗಳ ಅಗತ್ಯವಿದೆ. ಆ ನಿಟ್ಟಿನಲ್ಲಿ ನಿಟ್ಟೆ ವಿವಿ ತುಳುಭಾಷಾ ಪೀಠ ಡಾ. ಪದ್ಮನಾಭ ಕೇಕುಣ್ಣಾಯ ಹಾಗೂ ಡಾ. ಸಾಯಿಗೀತಾ ಅವರ ಐದು ವರ್ಷಗಳ ನಿರಂತರ ಪರಿಶ್ರಮದ ಫಲವಾಗಿ ಹೊರತಂದಿರುವ ತುಳುಜ್ಞಾತಿ ಪದಕೋಶ ಸಂಶೋದನಾಸಕ್ತರಿಗೆ ಹಾಗೂ ಅಧ್ಯಯನ ನಡೆಸುವವರಿಗೆ ಬಹಳ ಉಪಯುಕ್ತವಾಗಲಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು.

ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಸೆಮಿನಾರ್ ಹಾಲ್ ನಲ್ಲಿ ಮಂಗಳವಾರ ನಡೆದ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು ತುಳುಜ್ಞಾತಿ ಪದಕೋಶ ರಚನೆಗೆ 2014ರಲ್ಲಿ ನಿಟ್ಟೆ ವಿವಿಯ ಕುಲಾಧಿಪತಿ ವಿನಯ್ ಹೆಗ್ಡೆ ಅವರು ಚಾಲನೆ ನೀಡುವ ಮೂಲಕ ಯೋಜನೆಯ ನಿಟ್ಟೆ ವಿವಿಯ ಪ್ರಾಯೋಜಿತ ಯೋಜನೆಯಾಗಿ ರೂಪುಗೊಂಡಿತು. ಗಣಕಯಂತ್ರಕ್ಕೆ ಭಾರತೀಯ ಲಿಪಿಗಳನ್ನು ಅಳವಡಿಸಿದ ಪ್ರೊ.ಕೆ.ಪಿ. ರಾವ್ ಅವರು ತಾವು ರೂಪಿಸಿದ "ಅಪಾರ' ಹೆಸರಿನ ಫಾಂಟ್ ತಂತ್ರಾಂಶವನ್ನುತುಳುಜ್ಞಾತಿಪದಕೋಶಕ್ಕೆ ಒದಗಿಸಿದ ಡಾ. ಪದ್ಮನಾಭ ಕೇಕುಣ್ಣಾಯ ಅಕ್ಷರಶಃ ರೂಪುರೇಶೆಯನ್ನು ಸಿದ್ಧಪಡಿಸಿ ಅದರ ಕಾರ್ಯ ವಿಧಾನವನ್ನು ರೂಪಿಸಿದ್ದಾರೆ. ಹಾಗೆಯೇ ಇಂತಹ ಪದಕೋಶ ವಿಶ್ವದ ಎಲ್ಲರಿಗೂ ಲಭ್ಯವಾಗುವಂತೆ ತಜ್ಞರ ಸಲಹೆ ಪಡೆದು ಡಿಜಿಟಲೀಕರಣದ ವ್ಯವಸ್ಥೆಗೂ ಕಾರ್ಯಯೋಜನೆ ರೂಪಿಸಲಾಗುವುದು ಎಂದು ನುಡಿದರು.

ನಿಟ್ಟೆ ವಿವಿಯಿಂದ ಚಾಲನೆಗೊಂಡ ಯೋಜನೆಯ ಮಹತ್ವವನ್ನು ಅರಿತ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಎರಡನೆಯ ಕಾರ್ಯಗಾರ ವನ್ನು ಅದರ ಸಹಭಾಗಿತ್ವದಲ್ಲಿ ಮುಂದುವರಿಸಿ, ಪ್ರಾಯೋಜಕತ್ವಕ್ಕೆ ಒಂದು ವರ್ಷವಾದಾಗ ಮಾದರಿ ಪ್ರತಿಯೊಂದನ್ನು ಬಿಡುಗಡೆಗೊಳಿಸಲಾಗಿತ್ತು.

ನೂತನ ತುಳುಜ್ಞಾತಿ ಪದಕೋಶ ಡಾ. ಪದ್ಮನಾಭ ಕೇಕುಣ್ಣಾಯ ಹಾಗೂ ಡಾ. ಸಾಯಿಗೀತಾ ಸಂಪಾದಕ್ವದಲ್ಲಿ ಡಾ. ವಾಮನ ನಂದಾವರ, ಬೆನೆಟ್ ಅಮ್ಮನ್ನ ಹಾಗೂ ತಾಂತ್ರತಿಕ ಸಹಾಯಕ ಪ್ರದ್ಯೋತ್ ಹೆಗ್ಡೆ ಹಾಗೂ ವಿವಿಧ ಸಂಸ್ಥೆಗಳುವ ವಿದ್ವಾಂಸರ ಸಹಯೋಗದಲ್ಲಿ ಸಂಪಾದನಾ ಕಾರ್ಯ ನಡೆದು ಸಂಪನ್ನಗೊಂಡಿದ್ದು ಮಾ. 15ರಂದು ಬೆಳಗ್ಗೆ 11 ಗಂಟೆಗೆ ನಿಟ್ಟೆ ವಿವಿಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯ "ಚಿಂತನಾ' ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದರು.

ನಿಟ್ಟೆ ವಿವಿಗೆ ಅಭಿಮಾನವಾಗಿರುವ ತುಳು ಜ್ಞಾತಿ ಪದಕೋಶ ಬಿಡುಗಡೆ ಸಮಾರಂಭದಲ್ಲಿ ಬೆಂಗಳೂರು ವಿವಿಯ ವಿಶ್ರಾಂತ ಕುಲಪತಿ ಡಾ. ಹಂಪ ನಾಗರಾಜಯ್ಯ, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ್ ರೈ, ನಿಟ್ಟೆ ವಿವಿಯ ವಿಶ್ರಾಂತ ಕುಲಪತಿ ಡಾ. ಎಸ್. ರಮಾನಂದ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ. ಭಂಡಾರಿ ಭಾಗವಹಿಸುವರು. ನಿಟ್ಟೆ ವಿವಿಯ ಕುಲಾಧಿಪತಿ ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು ಸಹ ಕುಲಾಧಿಪತಿ ಡಾ. ಎಂ. ಶಾಂತಾರಾಮ ಶೆಟ್ಟಿ ಪಾಲ್ಗೊಳ್ಳುವರು ಎಂದರು.

ಸುದ್ದಿಗೋಷ್ಠಿಯಲ್ಲಿ ತುಳುಜ್ಞಾತಿ ಪದಕೋಶದ ಸಂಪಾದಕರಾದ ಡಾ. ಪದ್ಮನಾಭ ಕೇಕುಣ್ಣಾಯ ಹಾಗೂ ಡಾ. ಸಾಯಿಗೀತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News