ಶಿರ್ವ: ಆಶ್ರಮದ ವಿದ್ಯಾರ್ಥಿ ನಾಪತ್ತೆ

Update: 2019-03-12 16:36 GMT

ಶಿರ್ವ, ಮಾ.12: ಬಂಟಕಲ್ ಅರಸಿಕಟ್ಟೆಯ ದಯಾನಂದ ಛಾತ್ರಾಲಯ ಆಶ್ರಮದಲ್ಲಿದ್ದ ಯಾದಗಿರಿ ಜಿಲ್ಲೆಯ ಕವಡಿಮಟ್ಟಿ ಗ್ರಾಮದ ಹನುಮಂತ ಎಂಬವರ ಮಗ ಉದಯ ಕುಮಾರ್(16) ಎಂಬಾತ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಪಡುಬೆಳ್ಳೆಯ ಶ್ರೀನಾರಾಯಣಗುರು ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಉದಯ ಕುಮಾರ್, ಫೆ. 25ರಂದು ಸಂಜೆ ಮಂಗಳೂರಿಗೆ ಹೋಗುತ್ತೇನೆಂದು ಆಶ್ರಮದ ಸಹಪಾಠಿ ಜೊತೆ ಹೇಳಿ ಆಶ್ರಮದಿಂದ ಹೋದವನು ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾನೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News