ಮಹಿಳೆಯಿಂದ ಆತ್ಮಹತ್ಯೆಗೆ ಯತ್ನ

Update: 2019-03-13 17:27 GMT

ಕುಂದಾಪುರ, ಮಾ.13: ಮಹಿಳೆಯೊಬ್ಬರು ಕ್ಷುಲ್ಲಕ ಕಾರಣಕ್ಕೆ ತಾಯಿ ಜೊತೆ ಸಿಟ್ಟು ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಾ.12ರಂದು ಬೆಳಗ್ಗೆ ವಡೇರಹೋಬಳಿ ಗ್ರಾಮದ ಅಂಬೇಡ್ಕರ್ ನಗರದ ಜೆ.ಎಲ್.ಬಿ. ರೋಡ್ ಎಂಬಲ್ಲಿ ನಡೆದಿದೆ.

ಮೃತರನ್ನು ಅಂಬೇಡ್ಕರ್ ನಗರದ ಪ್ರಮೀಳಾ ಎಂಬವರ ಮಗಳು ಸೀಮಾ (27) ಎಂದು ಗುರುತಿಸಲಾಗಿದೆ. ವಿಪರೀತ ಮುಂಗೋಪ ಸ್ವಭಾವ ಹೊಂದಿದ್ದ ಇವರು ಎರಡನೆ ಹೆರಿಗೆಗಾಗಿ ಗಂಡನ ಮನೆಯಾದ ಭಟ್ಕಳದಿಂದ ತವರು ಮನೆಗೆ ಬಂದಿದ್ದರು.

ಮಹಿಳಾ ಸಂಘದಿಂದ ಸಾಲ ಪಡೆಯುವ ವಿಚಾರದಲ್ಲಿ ತಾಯಿಯೊಂದಿಗೆ ಸಿಟ್ಟು ಮಾಡಿಕೊಂಡ ಸೀಮಾ, ಮನೆಯ ಕೋಣೆಯಲ್ಲಿ ಒಳಗೆ ಹೋಗಿ ಚಿಲಕ ಹಾಕಿಕೊಂಡು ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News