ಜಾನುವಾರು ಕಳವು: ಆರೋಪಿ ಸೆರೆ
Update: 2019-03-13 17:34 GMT
ಮೂಡುಬಿದಿರೆ: ದನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮಿತ್ತಬೈಲಿನ ಗುಡ್ಡೆಯಂಗಡಿಯ ಸೌಹಾರ್ದ ನಗರ ಎಂಬಲ್ಲಿ ಬುಧವಾರ ನಡೆದಿದೆ. ಇನ್ನೋರ್ವ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ದನವೊಂದು ಕಳವಾಗಿದ್ದು, ತಕ್ಷಣ ಜಾಗೃತರಾದ ಸ್ಥಳೀಯರು ಕಾದು ಕುಳಿತಿದ್ದರು ಎನ್ನಲಾಗಿದ್ದು, ವಾಹನವೊಂದರಲ್ಲಿ ದನ ಕಳವುಗೈದ ಬಳಿಕ ಮತ್ತೊಂದು ವಾಹನದಲ್ಲಿ ಆರೋಪಿಗಳಾದ ಖಾದರ್ ಪಷಾ ಮತ್ತು ಸಫ್ವಾನ್ ಎಂಬವರು ಬಂದಿದ್ದರೆನ್ನಲಾಗಿದ್ದು ಸ್ಥಳೀಯರು ಬೆನ್ನಟ್ಟಿ ಕೈಕಂಬ ಸುರಲ್ಪಾಡಿಯಲ್ಲಿ ಖಾದರ್ ನನ್ನು ಕಾರು ಸಹಿತ ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.