ತಿರುವನಂತಪುರಂನಲ್ಲಿ ಕಡಲಿನ ಭೋರ್ಗರೆತ: 500ಕ್ಕೂ ಹೆಚ್ಚು ಮನೆಗಳು ಅಪಾಯದ ಭೀತಿಯಲ್ಲಿ

Update: 2019-03-20 06:24 GMT

ವಲಿಯತುರ, ಮಾ. 20: ತಿರುವನಂತಪುರಂ ನಗರದ ಸಮುದ್ರ ತೀರದಲ್ಲಿ ಸಮುದ್ರದ ಆರ್ಭಟ ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು 500ಕ್ಕೂ ಹೆಚ್ಚು ಮನೆಗಳು ಅಪಾಯ ಭೀತಿಯಲ್ಲಿದೆ ಎಂದು ವರದಿಯಾಗಿದೆ. 

ಪೂಂದುರಂ ನಿಂದ ವೆಳಿ ಪೊಯಿಕ್ಕರ ಎಂಬಲ್ಲಿವರಗೆ ಸಮುದ್ರ ತಟದಲ್ಲಿ ಸೋಮವಾರ ರಾತ್ರಿಯಿಂದ ಸಮುದ್ರ ಅಬ್ಬರಿಸುತ್ತಾ ದಡವನ್ನು ಆಕ್ರಮಿಸುತ್ತಾ ಮುಂದೆ ಬರುತ್ತಿದೆ.

ಕಳೆದ ಬಾರಿ ಸಮುದ್ರದ ಅಬ್ಬರಕ್ಕೆ ಮನೆಗಳು ಕುಸಿದಿದ್ದ ಅದೇ ವಲಿಯತುರ, ಕುಯಿವಿಳಾಗಂ, ವಲಿಯತೋಪು, ಕಣ್ಣಾತುರ, ಬೀಮಾ ಪಳ್ಳಿಗಳಲ್ಲಿ ಈ ಬಾರಿ ಹೆಚ್ಚು ಅಪಾಯದ ಬೆದರಿಕೆ ಸೃಷ್ಟಿಯಾಗಿದೆ. ಕಳೆದ ವರ್ಷವೂ ಈ ಭಾಗದಲ್ಲಿ 500ಕ್ಕೂ ಹೆಚ್ಚು ಮನೆಗಳು ಕುಸಿದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News