ಸುಜೀರ್ ಮಳ್ಳಿ ನವೀಕೃತ ಮಸೀದಿ ಉದ್ಘಾಟನೆ: ದಾರ್ಮಿಕ ಪ್ರವಚನ ಕಾರ್ಯಕ್ರಮ

Update: 2019-03-20 06:52 GMT

ಫರಂಗಿಪೇಟೆ, ಮಾ. 20: ಪುದು ಗ್ರಾಮದ ಸುಜೀರ್ ಮಳ್ಳಿಯಲ್ಲಿ ನಿರ್ಮಾಣವಾದ ನವೀಕೃತ ಹೈದ್ರೋಸಿಯಾ ಜುಮಾ ಮಸೀದಿ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಅಲ್ ಹಾಫಿಲ್ ಕುಮ್ಮನಮ್ ನಿಝಾಮುದ್ದೀನ್ ಅಝ್ಹರಿ ಅಲ್ ಖಾಸಿಮಿ ಕೇರಳ ಅವರು ದಾರ್ಮಿಕ ಪ್ರವಚನ ನೀಡಿದರು.

ಹೈದ್ರೋಸಿಯಾ ಜುಮಾ ಮಸೀದಿ ಸುಜೀರ್ ಮಳ್ಳಿ ಗೌರವಾಧ್ಯಕ್ಷ ಹಾಜಿ ಅಬ್ದುಲ್ ರಝಾಕ್ ಮಲೇಶ್ಯ ಉದ್ಘಾಟನೆ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೊಳ್ಯ ಜುಮ್ಮಾ ಮಸೀದಿ ಮುದರಿಸ್ ಸಯ್ಯದ್ ಯಹ್ಯಾ ತಂಙಳ್ ದುವಾಗೈದರು,  ಮಾರಿಪ್ಪಳ್ಳ ಮಸೀದಿ ಮುದರಿಸ್ ಖಲೀಲುರ್ರಹ್ಮಾನ್ ದಾರಿಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಅತಿಥಿಗಳಾಗಿ ಹೈದ್ರೋಶಿಯಾ ಜುಮಾ ಮಸೀದಿ ಸುಜೀರ್ ಮಳ್ಳಿ ಖತೀಬ್ ಅಬೂಬಕ್ಕರ್ ಅಲ್ ಅಲ್ ಖಾಸಿಮಿ ಕರ್ವೇಲ್, ಮಜೀದ್ ದಾರಿಮಿ,  ಅಲ್ ರಯ್ಯಾನ್ ಇಂಟರ್ ನ್ಯಾಷನಲ್ ಮಂಗಳೂರು ಮೊಹಮ್ಮದ್ ಇಲ್ಯಾಸ್, ಮಸೀದಿಯ ಅಧ್ಯಕ್ಷ ಇಬ್ರಾಹಿಮ್ ಮೋನು,  ಉಪಾಧ್ಯಕ್ಷ ಕೆಕೆ ಖಾದರ್, ಅಬ್ದುಲ್ ರಝಾಕ್, ಪ್ರ.ಕಾರ್ಯದರ್ಶಿ ಎಸ್ ಇಬ್ರಾಹಿಮ್, ಜೊತೆ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಮಳ್ಳಿ, ಎನ್ ರಿಯಾಝ್, ಕೋಶಾಧಿಕಾರಿ ಅಬೂಬಕ್ಕರ್, ಜಿಲ್ಲಾ ಪಂ ಮಾಜಿ ಸದಸ್ಯ ಉಮರ್ ಫಾರೂಕ್, ಪುದು ಗ್ರಾಪಂ ಅಧ್ಯಕ್ಷ ರಮ್ಲಾನ್, ಸದಸ್ಯರಾದ ಇಕ್ಬಾಲ್ ಸುಜೀರ್,  ನಝೀರ್ ಹತ್ತನೇಮೈಲ್ ಕಲ್ಲು, ಹಾಶಿರ್ ಪೇರಿಮಾರ್, ಮುಸ್ತಫ ಮೇಲ್ಮನೆ, ಇಸ್ಮಾಯಿಲ್ ಪಾವೂರು ಮತ್ತಿತರರು ಉಪಸ್ಥಿತರಿದ್ದರು. ಸದರ್ ಮುಅಲ್ಲಿಮ್ ದಾವೂದುಲ್ ಹಕೀಮ್ ಹನೀಫಿ ಅಝ್ಹರಿ ಸ್ವಾಗತಿಸಿದರು. ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News