ಮಂಗಳೂರು: ಫೈಝೀಸ್ ಅಸೋಸಿಯೇಶನ್‌ನಿಂದ ಅನುಸ್ಮರಣಾ ಸಂಗಮ

Update: 2019-03-20 13:21 GMT

ಮಂಗಳೂರು, ಮಾ.20: ಕರ್ನಾಟಕ ರಾಜ್ಯ ಫೈಝೀಸ್ ಅಸೋಸಿಯೇಶನ್ ವತಿಯಿಂದ ಅನುಸ್ಮರಣಾ ಸಂಗಮ ಹಾಗೂ ಸನ್ಮಾನ ಕಾರ್ಯಕ್ರಮವು ನಗರದ ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಬುಧವಾರ ಜರುಗಿತು.

ದ.ಕ.ಜಿಲ್ಲಾ ಸಮಸ್ತ ಮುಶಾವರ ಪ್ರಧಾನ ಕಾರ್ಯದರ್ಶಿ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಕಾರ್ಯಕ್ರಮ ಉದ್ಘಾಟಿಸಿದರು. ಫೈಝೀಸ್ ಅಸೋಸಿಯೇಶನ್‌ನ ಅಧ್ಯಕ್ಷ ಕೆ.ಎಂ. ಉಸ್ಮಾನುಲ್ ಫೈಝಿ ತೋಡಾರು ಅಧ್ಯಕ್ಷತೆ ವಹಿಸಿದ್ದರು. ರಹ್ಮತುಲ್ಲಾ ಖಾಸಿಮಿ ಮುತ್ತೇಡಂ ಮುಖ್ಯ ಪ್ರಭಾಷಣ ಗೈದರು. ದ.ಕ.ಜಿಲ್ಲಾ ಸಮಸ್ತ ಮುಶಾವರ ಉಪಾಧ್ಯಕ್ಷ ಇಬ್ರಾಹೀಂ ಬಾಖವಿ ಕೆ.ಸಿ.ರೋಡ್ ಝಿಯಾರತ್‌ನ ನೇತೃತ್ವ ವಹಿಸಿದ್ದರು.

ಸಮಸ್ತ ಕೇರಳ ಜಂಞಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರಾಗಿ ರಾಜ್ಯದಿಂದ ಆಯ್ಕೆಯಾದ ಶೈಖುನಾ ಮಾಹಿನ್ ಮುಸ್ಲಿಯಾರ್ ಹಾಗೂ ಶೈಖುನಾ ಎಂ.ಅಬ್ದುಲ್ಲಾ ಮುಸ್ಲಿಯಾರ್ ಕೊಡಗು ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅತ್ರಾಡಿ ಖಾಝಿ ಅಲ್‌ಹಾಜ್ ವಿ.ಕೆ. ಅಬೂಬಕರ್ ಮುಸ್ಲಿಯಾರ್, ಬೆಳ್ತಂಗಡಿಯ ದಾರುಸ್ಸಲಾಂ ಎಜುಕೇಶನ್ ಸೆಂಟರ್‌ನ ಕಾರ್ಯಾಧ್ಯಕ್ಷ ಝೈನುಲ್ ಆಬಿದೀನ್ ತಂಙಳ್, ಎಸ್ಕೆಎಸೆಸ್ಸೆಫ್ ದ.ಕ.ಜಿಲ್ಲಾ ಕೋಶಾಧಿಕಾರಿ ಸೈಯದ್ ಅಮೀರ್ ತಂಳ್ ಕಿನ್ಯ, ಶೈಖುನಾ ಬೊಳ್ಳೂರು ಉಸ್ತಾದ್, ಉಮರ್ ಫೈಝಿ ಶುಂಠಿಕೊಪ್ಪ, ಸಲೀಂ ಫೈಝಿ ಇರ್ಫಾನಿ ಮೂಡಿಗೆರೆ, ಝುಬೈರ್ ಫೈಝಿ ಅಂಕೋಲ, ಅಬ್ದುಲ್ ಖಾದರ್ ಫೈಝಿ ಅಲ್ ಖಾದಿರಿ ಜಾವಗಲ್, ಅಬ್ದುರ್ರಹ್ಮಾನ್ ಫೈಝಿ ಪಲಿಮಾರ್, ಎಸ್‌ಬಿ ಮುಹಮ್ಮದ್ ದಾರಿಮಿ, ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಕೆ.ಬಿ. ಅಬ್ದುಲ್ ಖಾದರ್ ದಾರಿಮಿ, ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಖಾಸಿಮ್ ದಾರಿಮಿ ಕಿನ್ಯ, ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಐ. ಮೊಯ್ದಿನಬ್ಬ ಹಾಜಿ, ರಿಯಾಝುದ್ದೀನ್ ಹಾಜಿ ಬಂದರ್, ಶೇಖ್ ಅಬ್ದುಲ್ಲಾ ಬಾಖವಿ ಮಂಗಳೂರು, ಮೂಸಲ್ ಫೈಝಿ, ಸುಲೈಮಾನ್ ಫೈಝಿ ಕನ್ಯಾನ, ಶರೀಫ್ ಫೈಝಿ ಕಡಬ, ಉಮರ್ ಫೈಝಿ ಸಾಲ್ಮರ, ಮಜೀದ್ ಫೈಝಿ ನಂದಾವರ, ಕೆ.ಯು. ಅಬ್ದುಲ್ ಮಜೀದ್ ಫೈಝಿ ಕೋಲ್ಪೆ, ಅಶ್ಫಾಕ್ ಫೈಝಿ ನಂದಾವರ, ಇರ್ಶಾದ್ ದಾರಿಮಿ ಮಿತ್ತಬೈಲ್, ಬಶೀರ್ ದಾರಿಮಿ ಪರಣೆ, ತ್ವೈಯಿಬ್ ಫೈಝಿ ಕುದ್ರೋಳಿ, ಇಸ್ಮಾಯೀಲ್ ಫೈಝಿ ಕರಾಯ ಉಪಸ್ಥಿತರಿದ್ದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ರ್ ಫೈಝಿ ಕೊಡಗು ಸ್ವಾಗತಿಸಿದರು. ಕೇಂದ್ರ ಜುಮಾ ಮಸೀದಿಯ ಖತೀಬ್ ವಿ.ಕೆ. ಸ್ವದಖತುಲ್ಲಾ ಫೈಝಿ ಪ್ರಾಸ್ತಾವಿಸಿ ದರು. ದ.ಕ. ಜಿಲ್ಲಾ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ವಂದಿಸಿದರು. ಸಂಘಟನಾ ಕಾರ್ಯದರ್ಶಿ ಕೆಎಂಎಸ್ ಫೈಝಿ ಕರಾಯ ಮತ್ತು ಸ್ವಾಗತ ಸಮಿತಿಯ ಸಂಚಾಲಕ ಜಾಬಿರ್ ಫೈಝಿ ಬನಾರಿ ಕಾರ್ಯಕ್ರಮ ನಿರೂಪಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News