ಸೋಮವಾರ ಥ್ಯೆಲ್ಯಾಂಡ್‌ನಲ್ಲಿ ಮೃತಪಟ್ಟ ಕುಂದಾಪುರ ಯುವಕನ ಅಂತ್ಯಕ್ರಿಯೆ

Update: 2019-03-20 16:23 GMT

ಕುಂದಾಪುರ, ಮಾ. 20: ಕಳೆದ ಸೋಮವಾರ ಥ್ಯೆಲ್ಯಾಂಡಿನಲ್ಲಿ ಸಾವಿಗೀಡಾದ ಕೋಟೇಶ್ವರ ಸಮೀಪದ ಗೋಪಾಡಿ ಗ್ರಾಪಂ ನಿವಾಸಿ ರೂಪೆಟ್ ಕಿರಣ್ ಬೆರೆಟ್ಟೋ (35) ಅವರ ಶವವನ್ನು ಬೆಂಗಳೂರು ಮೂಲಕ ಕೋಟೇಶ್ವರಕ್ಕೆ ತರಲಾಗಿದ್ದು, ಬುಧವಾರ ಸಂಜೆ ಕೋಟೇಶ್ವರದ ಸೈಂಟ್ ಅಂಥೋನಿ ಚರ್ಚ್‌ನಲ್ಲಿ ಸಕ್ರೀಯ ಧಾರ್ಮಿಕ ವಿಧಿಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.

ನಿವೃತ್ತ ಶಿಕ್ಷಕ ಜೇಮ್ಸ್ ಬೆರೆಟ್ಟೋ ಪುತ್ರ ಕಿರಣ್ ಥೈಲ್ಯಾಂಡ್ ದೇಶದಲ್ಲಿ ಟೂಲ್ ಡಿಸೈನ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಎಂದಿನಂತೆ ಸೋಮವಾರ ಕಾರಿನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದರು. ಕಿರಣ್ ವಿವಾಹ ಇತ್ತೀಚೆಗೆ ನಡೆದಿದ್ದು, ಕಳೆದ ಡಿಸೆಂಬರ್‌ನಲ್ಲಿ ತಮ್ಮ ಹುಟ್ಟಹಬ್ಬದ ಸಂದರ್ಭದಲ್ಲಿ ಊರಿಗೆ ಬಂದು ಹಿಂದಿರುಗಿದ್ದರು. ಅವರು ಪತ್ನಿ, ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News