ಉಡುಪಿ: ನಿರ್ಗತಿಕರ ವಾತ್ಸಲ್ಯ ಕೇಂದ್ರ ಉದ್ಘಾಟನೆ

Update: 2019-03-21 17:31 GMT

ಉಡುಪಿ, ಮಾ.21: ಅನಾಥರು ಹಾಗೂ ನಿರ್ಗತಿಕರಿಗೆ ಉಚಿತ ಊಟ, ಬಟ್ಟೆ ಹಾಗೂ ವೈದ್ಯಕೀಯ ಚಿಕಿತ್ಸೆ ನೀಡುವ ಉದ್ದೇಶದಿಂದ 76 ಬಡಗಬೆಟ್ಟು ಗ್ರಾಮದ ಕುಕ್ಕಿಕಟ್ಟೆ ಮಸೀದಿಯ ಬಳಿ ಆರಂಭಿಸಲಾದ ವಾತ್ಸಲ್ಯ ಕೇಂದ್ರವನ್ನು ನಿರ್ಗತಿಕರಾದ ಬೆಂಗಳೂರು ಮೂಲದ ಸರೋಜಮ್ಮ ಬುಧವಾರ ಉದ್ಘಾಟಿಸಿದರು.

ಈ ಸಂದರ್ಭ ವಾತ್ಸಲ್ಯ ಕೇಂದ್ರದ ವ್ಯವಸ್ಥಾಪಕ ಅನ್ಸಾರ್ ಅಹ್ಮದ್, ಅಂಬಲಪಾಡಿ ರೋಟರಿ ಅಧ್ಯಕ್ಷ ಖಲೀಲ್ ಅಹ್ಮದ್, ಮಲಬಾರ್ ಗೋಲ್ಟ್ ನ ವ್ಯವಸ್ಥಾಪಕ ಹಫೀಝ್ ರಹ್ಮಾನ್, ಮಾಜಿ ನಗರಸಭಾ ಸದಸ್ಯ ಹಿಲರಿ ಜತ್ತನ್ನ, ರಾಘವೇಂದ್ರ ಶೆಟ್ಟಿ, ಉದ್ಯಮಿ ಸಮೀರ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News