ತೊಕ್ಕೊಟ್ಟು: ಎಸ್ಸೆಸ್ಸೆಫ್ ನಿಂದ ‘ಸಂಘ ಸ್ಫೂರ್ತಿ' ಕಾರ್ಯಾಗಾರ
Update: 2019-03-24 07:02 GMT
ಉಳ್ಳಾಲ, ಮಾ.24: ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ವ್ಯಾಪ್ತಿಗೊಳಪಡುವ ಎಲ್ಲಾ ಶಾಖೆಗಳ ಪ್ರಧಾನ ಕಾರ್ಯದರ್ಶಿ ಹಾಗೂ ಶಾಖಾ ಉಸ್ತುವಾರಿಗಳಿಗೆ ‘ಸಂಘ ಸ್ಫೂರ್ತಿ ಕಾರ್ಯಾಗಾರ’ವು ಮಾರ್ಚ್ 22ರಂದು ಸೆಕ್ಟರ್ ಕಚೇರಿಯಲ್ಲಿ ನಡೆಯಿತು.
ರಾಜ್ಯ ವಿಸ್ಡಂ ಸಮಿತಿಯ ಕನ್ವೀನರ್ ಮುಸ್ತಫಾ ಮಾಸ್ಟರ್ ಉಳ್ಳಾಲ ಶಾಖೆಯ ಕಡತಗಳ ನಿಭಾಯಿಸುವಿಕೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸೆಕ್ಟರ್ ಕೋಶಾಧಿಕಾರಿ ಶೌಕತ್ ಪಟ್ಲ, ರೈಟೀಂ ಟ್ಯೂಟರ್ ಇಮ್ರಾನ್ ಸ್ವಲಾತ್ ನಗರ, ಕಾರ್ಯದರ್ಶಿ ಶಫೀಕ್ ಅಳೇಕಲ, ಉಳಿದಂತೆ ಸೆಕ್ಟರ್ ಹಾಗೂ ಶಾಖೆಯ ನಾಯಕರುಗಳು ಭಾಗವಹಿಸಿದ್ದರು.
ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅನ್ಸಾರ್ ಅಳೇಕಲ ಸ್ವಾಗತಿಸಿ, ವಂದಿಸಿದರು.