×
Ad

ಹೆಜಮಾಡಿ: ಇವಿಎಂ, ವಿವಿಪ್ಯಾಟ್ ಕುರಿತು ಪ್ರಾತ್ಯಕ್ಷಿಕೆ

Update: 2019-03-27 21:59 IST

ಉಡುಪಿ, ಮಾ. 27: ಜಿಲ್ಲೆಯ ಹೆಜಮಾಡಿ ಗ್ರಾಪಂನಲ್ಲಿ ಸುಮಾರು 125ಕ್ಕೂ ಅಧಿಕ ಮೀನುಗಾರರು, ಮೀನು ಮಾರಾಟ ಮಾಡುವ ಮಹಿಳೆಯರು, ಸಹಕಾರಿ ಸಂಘದ ಪದಾಧಿಕಾರಿಗಳೊಂದಿಗೆ ಉಡುಪಿಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಿ. ಪಾರ್ಶ್ವನಾಥ್, ಉಡುಪಿ ಮೀನುಗಾರಿಕೆ ಸಹಾಯಕ ನಿರ್ದೇಶಕ ಕಿರಣ್ ಬಿ.ಡಿ., ಹೆಜಮಾಡಿ ಗ್ರಾಪಂ ಪಿಡಿಓ, ಗ್ರಾಮ ಲೆಕ್ಕಾಧಿಕಾರಿ ಮತ್ತು ಗ್ರಾಪಂನ ಇತರ ಸಿಬ್ಬಂದಿಗಳು ಮತದಾರರ ಜಾಗೃತಿ ಅಭಿಯಾನ ವನ್ನು ನಡೆಸಿದರು.

ಕಾರ್ಯಕ್ರಮದಲ್ಲಿ ಮತದಾರರಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸುವುದರೊಂದಿಗೆ, ಕಡ್ಡಾಯ ಮತದಾನದ ಕುರಿತು ಅರಿವು ಮೂಡಿಸಲಾಯಿತು. ಹಾಗೂ ಮೀನುಗಾರರಿಗೆ ಮತದಾನದ ಯಂತ್ರಗಳಾದ ಇವಿಎಂ ಹಾಗೂ ವಿವಿಪ್ಯಾಟ್‌ಗಳ ಕುರಿತು ಪ್ರಾತ್ಯಕ್ಷತೆ ತೋರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News