ನೀರವ್ ಮೋದಿ ಗಡೀಪಾರು ಪ್ರಕರಣ: ಸಿಬಿಐ ತಂಡ ಲಂಡನ್‌ಗೆ ತೆರಳುವ ನಿರೀಕ್ಷೆ

Update: 2019-03-27 17:48 GMT

ಹೊಸದಿಲ್ಲಿ, ಮಾ.27: ಲಂಡನ್‌ನಲ್ಲಿ ಬಂಧನಲ್ಲಿರುವ ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರ ನಡೆಯಲಿರುವ ಹಿನ್ನೆಲೆಯಲ್ಲಿ ಸಿಬಿಐ ತಂಡವೊಂದು ಲಂಡನ್‌ಗೆ ತೆರಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

ಮೋದಿಯನ್ನು ಭಾರತಕ್ಕೆ ಗಡೀಪಾರು ಮಾಡುವ ಪ್ರಕ್ರಿಯೆಗೆ ಪೂರಕವಾಗಿ , ಸಿಬಿಐಯ ಜಂಟಿ ನಿರ್ದೇಶಕರ ಸ್ಥಾನಮಾನದ ಅಧಿಕಾರಿಯೊಬ್ಬರನ್ನು ಅಗತ್ಯ ದಾಖಲೆಗಳೊಂದಿಗೆ ಲಂಡನ್‌ಗೆ ತೆರಳಲು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ಕಳೆದ ವರ್ಷ ಮಾಡಿದ್ದ ಕೋರಿಕೆಯಂತೆ ಮೋದಿ ವಿರುದ್ಧ ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು ಹಾಗೂ ಬಳಿಕ ಲಂಡನ್‌ನಲ್ಲಿ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News