ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Update: 2019-03-28 16:58 GMT

ಅಮಾಸೆಬೈಲು, ಮಾ.28: ಪಿರ್ಯಾದಿದಾರರಾದ ರಾಘವೇಂದ್ರ ನಾಯ್ಕ ಎಂಬವರ ತಂದೆ ಅಮಾಸೆಬೈಲು ಗ್ರಾಮದ ಕೆಳಸುಂಕ ನಿವಾಸಿ ಗೋಪು ನಾಯ್ಕ ಕೋಣೆಯ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ:  ನೀಲಾವರ ಗ್ರಾಮದ ತಡೆಕಲ್ಲು ನಿವಾಸಿ ಉಷಾಂತ್ ಹೆಗ್ಡೆ ಎಂಬವರ ಪತ್ನಿ ಶ್ರೀಮತಿ(50) ಎಂಬವರು ಮಾ.27ರಂದು ಸಂಜೆ ವೇಳೆ ಮನೆಯ ಸಮೀಪ ಹಾಡಿಯಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News