ಚುನಾವಣಾ ಅಕ್ರಮಗಳ ವಿರುದ್ಧ ಕ್ರಮಕ್ಕೆ ‘ಸಿ ವಿಜಿಲ್’ ಆ್ಯಪ್

Update: 2019-03-31 13:28 GMT

ಉಡುಪಿ, ಮಾ.31: ಚುನಾವಣೆಯಲ್ಲಿ ಯೋಗ್ಯ, ಪ್ರಾಮಾಣಿಕ ಅಭ್ಯರ್ಥಿ ಜಯ ಗಳಿಸಬೇಕೆಂಬ ಅಭಿಲಾಷೆ ಹೊಂದಿರುವ ಮತದಾರರು, ತಮ್ಮ ಪ್ರದೇಶ ದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುತ್ತ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವ ವ್ಯಕ್ತಿಗಳ ವಿರುದ್ದ ಭಾರತೀಯ ಚುನಾವಣಾ ಆಯೋಗ ಈಗಾ ಗಲೇ ಬಿಡುಗಡೆ ಮಾಡಿರುವ ‘ಸಿ ವಿಜಿಲ್’ ಎಂಬ ವಿನೂತನ ಆ್ಯಪ್‌ನಲ್ಲಿ ದೂರು ನೀಡಬಹುದಾಗಿದೆ.

ಈ ಆ್ಯಪ್ ಚುನಾವಣೆಯಲ್ಲಿ ಪ್ರಾಮಾಣಿಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸದಾ ಜಾಗೂರೂಕತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ದೂರು ನೀಡಿದ ಕೇವಲ 100 ನಿಮಿಷದಲ್ಲಿ ಈ ಕುರಿತು ಕೈಗೊಂಡಿರುವ ಕ್ರಮದ ಬಗ್ಗೆ ಈ ಆಪ್ ಮೂಲಕ ಮೊಬೈಲ್‌ಗೆ ಮಾಹಿತಿ ನೀಡಲಾಗುತ್ತದೆ.

ಆಂಡ್ರಾಯ್ಡಾ ಮೊಬೈಲ್‌ನಲ್ಲಿ ಗೂಗಲ್ ಪ್ಲೇಸ್ಟೋರ್‌ನಲ್ಲಿರುವ ಸಿ ವಿಜಿಲ್ ಆಪ್‌ನ್ನು ಡೌನ್‌ಲೋಡ್ ಮಾಡಿಕೊಂಡು, ತಮ್ಮ ಪರಿಸರದಲ್ಲಿ ಕಂಡು ಬರುವ ಯಾವುದೇ ರೀತಿಯ ಚುನಾವಣಾ ಅಕ್ರಮಗಳ ಕುರಿತು ಪೋಟೋ ಅಥವಾ ವೀಡಿಯೋವನ್ನು ಅಪ್ ಲೋಡಿ ಮಾಡಿದರೆ, ಕೂಡಲೇ ನಿಮ್ಮ ದೂರು ಸ್ವೀಕರಿಸಿದ ಕುರಿತು ಮೊಬೈಲ್‌ಗೆ ಸಂದೇಶ ಬರುತ್ತದೆ.

ದೂರು ಸ್ವೀಕರಿಸಲು ನಿಯೋಜಿಸಲಾಗಿರುವ ವಿವಿಧ ಅಧಿಕಾರಿಗಳು ತಕ್ಷಣ ದಲ್ಲಿ ಕಾರ್ಯೊನ್ಮೂಕರಾಗಿ ಪರಿಶೀಲನೆ ನಡೆಸಲಿದ್ದು, ತಾವು ನೀಡಿದ ದೂರು ಸರಿಯಾಗಿದ್ದರೆ ಸಂಬಂಧಪಟ್ಟವರ ವಿರುದ್ದ ಕ್ರಮ ಕೈಗೊಳ್ಳಲಿದ್ದಾರೆ. ಅದೂ ಕೇವಲ 100 ನಿಮಿಷದಲ್ಲಿ ನೀವು ನೀಡಿದ ದೂರು ವಿಲೇವಾರಿ ಆಗಲಿದೆ. ಒಂದು ವೇಳೆ ಅ ದೂರು ಕುರಿತು ಹೆಚ್ಚಿನ ತನಿಖೆಯ ಅಗತ್ಯವಿದ್ದಲ್ಲಿ ಬೇಕಾಗ ಬಹುದಾದ ಕಾಲಾವಕಾಶದ ಬಗ್ಗೆ ಕೂಡ ಮೊಬೈಲ್‌ಗೆ ಮಾಹಿತಿ ಬರುತ್ತದೆ.

ನೀವು ದೂರು ನೀಡಿದ ಕುರಿತಂತೆ ಈ ಆಪ್‌ನಲ್ಲಿ ಸಮಯ ಮತ್ತು ಸ್ಥಳದ ಜಿಪಿಎಸ್ ಲೊಕೇಷನ್ ನಮೂದಾಗಿರುವುದರಿಂದ, ಆ ಸ್ಥಳಕ್ಕೆ ಸಮೀಪದಲ್ಲಿ ರುವ ಅಧಿಕಾರಿಗಳ ತಂಡ ನಿಗಧಿತ ಅವಧಿಯೊಳಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ.

ಹಣ, ಮದ್ಯ ಹಂಚುವಿಕೆ, ಉಡುಗೊರೆಗಳ ಆಮಿಷ, ಜನಾಂಗೀಯ ಭಾವನೆ ಕೆರಳಿಸುವ ಭಾಷಣ, ಪೇಯ್ಡ ನ್ಯೂಸ್ ಪ್ರಕಟ, ಸುಳ್ಳು ಸುದ್ದಿ ಪ್ರಕಟ, ಬೆದರಿಕೆ ಹಾಕುವುದು, ಆಸ್ತಿಪಾಸ್ತಿಗೆ ಹಾನಿ ಮಾಡುವುದು ಸೇರಿದಂತೆ ಯಾವುದೇ ರೀತಿಯ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ವಿರುದ್ದ ಸಾರ್ವಜನಿಕರು ದೂರು ನೀಡಬಹುದಾಗಿದೆ.

ಸೀಜ್ ಮಾಡುವ ಪ್ರಕರಣವಾಗಿದಲ್ಲಿ ಸಂಂಬಧಪಟ್ಟ ವಸ್ತುಗಳನ್ನು ಅಧಿಕಾರಿ ಗಳು ಸೀಜ್ ಮಾಡಲಿದ್ದಾರೆ. ಕ್ರಿಮಿನಲ್ ಪ್ರಕರಣವಾಗಿದ್ದಲ್ಲಿ ಕೂಡಲೇ ಪ್ರಕರಣ ದಾಖಲಿಸಿ ಎಫ್‌ಐಆರ್ ದಾಖಲಿಸಲಾಗುತ್ತದೆ. ಆದುದರಿಂದ ಮತ ದಾರರು ಕೂಡಲೇ ಈ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ಚುನಾ ವಣಾ ಅಕ್ರಮಗಳ ಕುರಿತು ದೂರು ನೀಡಬೇಕು. ಮತದಾರರ ದೂರುಗಳ ಕುರಿತು ಕ್ರಮ ಕೈಗೊಳ್ಳಲು ಅಧಿಕಾರಿಗಳ ತಂಡ ದಿನದ 24ಗಂಟೆಗಳ ಕಾಲವೂ ಕಾರ್ಯನಿರ್ವಹಿಸುತ್ತದೆ ಎಂದು ಎಂದು ಸಿ ವಿಜಿಲ್‌ನ ಅಧಿಕಾರಿ ಮಂಜುನಾಥ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 48 ದೂರುಗಳು

ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಸಿ ವಿಜಿಲ್ ಆ್ಯಪ್ ಮೂಲಕ 48 ದೂರು ಗಳನ್ನು ಸ್ವೀಕರಿಸಲಾಗಿದೆ.

ಪ್ರಸ್ತುತ ಚುನಾವಣಾ ನಾಮಪತ್ರ ಸಲ್ಲಿಕೆ ಮುಗಿದು ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು ನಿರ್ಧಾರವಾಗಿರುವುದರಿಂದ, ಚುನಾವಣಾ ಪ್ರಚಾರದ ಭರಾಟೆ ಹೆಚ್ಚಾಗಲಿದ್ದು, ವಿವಿಧ ರೀತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗುವ ಸಾಧ್ಯತೆಗಳಿವೆ. ಆದುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಿ ವಿಜಿಲ್ ಆಪ್ ಬಳಸಿ ದೂರು ನೀಡಿದಲ್ಲಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಅಧಿಕಾರಿ ಮಂಜುನಾಥ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News