ಎಸ್ಸೆಸ್ಸೆಫ್ ಉಳ್ಳಾಲ ವತಿಯಿಂದ ನಾಯಕತ್ವ ಕಾರ್ಯಗಾರ

Update: 2019-03-31 17:38 GMT

ಉಳ್ಳಾಲ: ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ನ ವತಿಯಿಂದ ನಾಯಕತ್ವ ಕಾರ್ಯಗಾರ ಕಾರ್ಯಕ್ರಮ ಮಾ. 31 ರಂದು ತಲಪಾಡಿ ಮದ್ರಸ ಕೊಠಡಿಯಲ್ಲಿ ಡಿವಿಶನ್ ಅಧ್ಯಕ್ಷರಾದ ಖುಬೈಬ್ ತಂಙಳ್ ಉಳ್ಳಾಲ ಅಧ್ಯಕ್ಷತೆಯಲ್ಲಿ ನಡೆಯಿತು.

ಎಸ್ಸೆಸ್ಸೆಫ್ ರಾಜ್ಯ ಸುಪ್ರೀಮ್ ಕೌನ್ಸಿಲ್ ಚೇರ್ಮಾನ್ ಡಾ. ಎಮ್.ಎಸ್.ಎಮ್ ಅಬ್ದುರ್ರಶೀದ್ ಝೈನಿ ಖಾಮಿಲ್ ಸಖಾಫಿ ಉದ್ಘಾಟಿಸಿದರು. ಇಬ್ರಾಹಿಂ ಸಖಾಫಿ ಕೊಟೂರ್ ನಾಯಕತ್ವ ಕಾರ್ಯಗಾರ ವನ್ನು ನಡೆಸಿಕೊಟ್ಟರು.

ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಮತ್ತು ಉಳ್ಳಾಲ ಡಿವಿಶನ್ ಉಸ್ತುವಾರಿ ಆರಿಫ್ ಝುಹ್ರಿ ಮುಕ್ಕ ಪ್ರಾಸ್ತಾವಿಕ ಮಾತನಾಡಿದರು. ಡಿವಿಶನ್ ನ ಕಾರ್ಯಕಾರಿ ಸಮಿತಿ ಸದಸ್ಯರು, ಸೆಕ್ಟರ್ ನ ಪದಾಧಿಕಾರಿಗಳು ಹಾಗೂ ಶಾಖಾ ನಾಯಕರು ಭಾಗವಹಿಸಿದರು.

ಡಿವಿಶನ್ ಪ್ರ ಕಾರ್ಯದರ್ಶಿ ಅಬ್ದುಲ್ ಹಮೀದ್ ತಲಪಾಡಿ ಸ್ವಾಗತಿಸಿದರು. ಕ್ಯಾಂಪ್ ಆಮೀರ್ ಇರ್ಫಾನ್ ಅಬ್ದುಲ್ಲಾ ನೂರಾನಿ ಕಾರ್ಯಕ್ರಮ ನಿರೂಪಿಸಿದರು. ಕ್ಯಾಂಪ್ ಉಪ ಕನ್ವೀನರ್ ಜಾಫರ್ ಯು ಎಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News