×
Ad

ಚುನಾವಣೆ ಕರ್ತವ್ಯನಿರತರಿಗೂ ಮತದಾನಕ್ಕೆ ಅವಕಾಶ

Update: 2019-04-02 20:47 IST

ಉಡುಪಿ, ಎ.2: ಖಾಸಗಿ ವಾಹನ ಸೇರಿದಂತೆ ಲೋಕಸಉ ಚುನಾವಣೆ ಮತಗಟ್ಟೆ ಕರ್ತವ್ಯಕ್ಕೆ ನಿಯೋಜಿಸುವ ಎಲ್ಲಾ ವಾಹನಗಳ ಚಾಲಕರಿಗೂ ಮತದಾನ ಮಾಡಲು ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಚುನಾವಣಾ ಸಿಬ್ಬಂದಿಗಳಿಗೆ ಅಂಚೆ ಮತದಾನ ಸಿದ್ಧತೆ ಕುರಿತ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಚುನಾವಣಾ ಕರ್ತವ್ಯಕ್ಕೆ ಬಳಸಲಾಗುವ ಬಸ್ಸು, ಜೀಪು, ವ್ಯಾನು ಸೇರಿದಂತೆ ಎಲ್ಲಾ ಖಾಸಗಿ ವಾಹನಗಳ ಚಾಲಕರು ಮತದಾನದಿಂದ ವಂಚಿತರಾಗು ತ್ತಿದ್ದರು. ಈ ಹಿನ್ನೆಲೆಯಲ್ಲಿ ಆರ್‌ಟಿಓ ಅಧಿಕಾರಿಗಳು ಕೂಡಲೇ ಚುನಾವಣಾ ಮತಗಟ್ಟೆ ಕರ್ತವ್ಯಕ್ಕೆ ನಿಯೋಜಿಸುವ ಎಲ್ಲಾ ವಾಹನಗಳ ಪಟ್ಟಿಯನ್ನು ಸಿದ್ಧಗೊಳಿಸಬೇಕು. ಈ ವಾಹನಗಳ ಚಾಲಕರ ಚಾಲನ ಪರವಾನಗೆ (ಡಿಎಲ್) ಮತ್ತು ಎಪಿಕ್ ಕಾರ್ಡ್ ಪ್ರತಿಯನ್ನು ಸಂಗ್ರಹಿಸಿ ನೀಡಬೇಕು. ಕರ್ತವ್ಯಕ್ಕೆ ನಿಯೋಜಿಸಲಾಗುವ ಮತಗಟ್ಟೆಯಲ್ಲಿಯೇ ಅವರಿಗೆ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಮತಗಟ್ಟೆ ಕರ್ತವ್ಯದಲ್ಲಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿಗಳಿಗೆ ಆಯಾ ಮತಗಟ್ಟೆಯಲ್ಲಿಯೇ ಮತದಾನ ಮಾಡಲು ‘ಚುನಾವಣಾ ಕರ್ತವ್ಯ ಪ್ರಮಾಣಪತ್ರ’ ನೀಡಲಾಗುವುದು. ಉಡುಪಿ- ಚಿಕ್ಕಮಗಳೂರು ಕ್ಷೇತ್ರ ವ್ಯಾಪ್ತಿಯ ಹೊರಗೆ ಮತದಾನ ಪಟ್ಟಿಯಲ್ಲಿ ಹೆಸರು ಇರುವ ಸಿಬ್ಬಂದಿಗಳಿಗೆ ಅಂಚೆ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹೆಪ್ಸಿಬಾ ರಾಣಿ ತಿಳಿಸಿದರು.

ಲೋಕಸಾಚುನಾವಣೆಯಲ್ಲಿಮತಗಟ್ಟೆಕರ್ತವ್ಯದಲ್ಲಿರುವಎಲ್ಲಾಅಧಿಕಾರಿ,ಸಿಬ್ಬಂದಿಗಳಿಗೆಆಯಾಮತಗಟ್ಟೆಯಲ್ಲಿಯೇಮತದಾನಮಾಡಲು‘ಚುನಾವಣಾಕರ್ತವ್ಯಪ್ರಮಾಣಪತ್ರ’ನೀಡಲಾಗುವುದು.ಉಡುಪಿ-ಚಿಕ್ಕಮಗಳೂರುಕ್ಷೇತ್ರವ್ಯಾಪ್ತಿಯಹೊರಗೆಮತದಾನಪಟ್ಟಿಯಲ್ಲಿಹೆಸರುಇಅಂಚೆ ಮತದಾನ ಹಾಗೂ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ಮೂಲಕ ಮತದಾನ ಮಾಡುವವರು ಕೂಡಲೇ ಸಂಬಂಧಪಟ್ಟ ನಮೂನೆಯಲ್ಲಿ ತಮ್ಮ ಕೋರಿಕೆಯನ್ನು ಎ.12ರೊಳಗೆ ಸಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ವಾಹನಗಳಿಗೆ ಜಿಪಿಎಸ್: ಚುನಾವಣಾ ದಿನದ ಕರ್ತವ್ಯಕ್ಕೆ ಬಳಸಲಾಗುವ ಎಲ್ಲಾ ಖಾಸಗಿ ಮತ್ತು ಸರಕಾರಿ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲಾಗುವುದು. ಇದಕ್ಕಾಗಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಜಿಪಿಎಸ್ ಇಲ್ಲದ ವಾಹನಗಳನ್ನು ಯಾವುದೇ ಕಾರಣಕ್ಕೂ ಚುನಾವಣಾ ಕರ್ತವ್ಯಕ್ಕೆ ಬಳಸುವುದಿಲ್ಲ ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News