ಸಿಪಿಎಂನಿಂದ ರಾಜಕೀಯ ಸಮಾವೇಶ

Update: 2019-04-03 15:24 GMT

ಉಡುಪಿ, ಎ.3: ಕೇಂದ್ರದಲ್ಲಿ ಕಳೆದ 5ವರ್ಷಗಳ ಆಡಳಿತದಲ್ಲಿ ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ, ಜನರ ಐಕ್ಯತೆಯನ್ನು ಮುರಿಯಲು, ಕೋಮು ಭಾವನೆಯನ್ನು ಕೆರಳಿಸಲು ಶತ ಪ್ರಯತ್ನ ಪಟ್ಟಿದೆ. ಇಂತಹ ಬಿಜೆಪಿಯನ್ನು ಸೋಲಿಸಲು ಸಿಪಿಐ (ಎಂ) ಪಕ್ಷದ ಕೇಂದ್ರ ಸಮಿತಿ ಕರೆ ನೀಡಿದೆ.

ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಜಿಲ್ಲೆಯ ವಿವಿಧೆಡೆ ರಾಜಕೀಯ ಸಮಾವೇಶಗಳನ್ನು ಏರ್ಪಡಿಸಿ ಕೇಂದ್ರ ಬಿಜೆಪಿ ಸರಕಾರದ ವೈಫಲ್ಯಗಳನ್ನು ಜನತೆಗೆ ವಿವರಿಸಲು ಪಕ್ಷ ನಿರ್ಧರಿಸಿದೆ. ಪಕ್ಷದ ಸದಸ್ಯರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಭಾಗವಹಿಸಲಿರುವ ಈ ಸಮಾವೇಶವನ್ನು ರಾಜ್ಯ ಕಾರ್ಯದರ್ಶಿ ಯು. ಬಸವರಾಜು ಎ.7ರಂದು ಬೆಳಗ್ಗೆ 10ಗಂಟೆಗೆ ಬೈಂದೂರು ರೋಟರಿ ಭವನದಲ್ಲಿ ಉದ್ಘಾಟಿಸಲಿದ್ದಾರೆ.
ಅದೇ ದಿನ ಅಪರಾಹ್ನ ನಾಡ ಪಡುಕೋಣೆಯಲ್ಲಿ, ಎ.8ರಂದು ಕುಂದಾಪುರ ದಲ್ಲಿ ಮತ್ತು ಎ.10ರಂದು ಸಿದ್ದಾಪುರದಲ್ಲಿ ರಾಜಕೀಯ ಸಮಾವೇಶಗಳು ನಡೆಯಲಿವೆ ಎಂದು ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಿ.ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News