ಕುಂದಾಪುರ: ರೈಲು ಬಡಿದು ವ್ಯಕ್ತಿ ಸಾವು

Update: 2019-04-03 16:06 GMT

ಕುಂದಾಪುರ, ಎ.3: ಕುಂದಾಪುರ ಕಡೆಗೆ ಹೋಗುತಿದ್ದ ರೈಲೊಂದು ಬಡಿದು ಬಸ್ರೂರು ಗ್ರಾಮದ ಹಟ್ಟಿಕುದ್ರು ರೈಲ್ವೆಯ ಹಳಿಯಲ್ಲಿ ನಡೆದುಕೊಂಡು ಮನೆಯತ್ತ ಸಾಗುತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

ಮೃತರನ್ನು ರಾಜಶೇಖರ (45) ಎಂದು ಗುರುತಿಸಲಾಗಿದೆ. ಇವರು ಇಂದು ಬೆಳಗ್ಗೆ 7:05ರ ಸುಮಾರಿಗೆ ಹಟ್ಟಿಕುದ್ರು ರೈಲ್ವೆ ಹಳಿಯಲ್ಲಿ ನಡೆದುಕೊಂಡು ಆನಗಳ್ಳಿ ತೊಪ್ಲುವಿಗೆ ಬರುತಿದ್ದಾಗ ಈ ಘಟನೆ ನಡೆದಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News