ಮಂಗಳೂರಿನಲ್ಲಿ ಮಾಧ್ಯಮಗಳ ವಿರುದ್ಧ ಹರಿಹಾಯ್ದ ಸಿಎಂ ಕುಮಾರಸ್ವಾಮಿ

Update: 2019-04-07 07:27 GMT

ಮಂಗಳೂರು, ಎ.7: ದ.ಕ. ಮತ್ತು ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ರವಿವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮಂಡ್ಯದಲ್ಲಿ ನಿಖಿಲ್ ಪರ ಜನರ ಒಲವು ಕಂಡ ಕೆಲವು ಮಾಧ್ಯಮದ ವ್ಯವಸ್ಥಾಪಕರು ತೀವ್ರ ಒದ್ದಾಡುತ್ತಿದ್ದಾರೆ. ಮಂಡ್ಯ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನನ್ನು ಯಾವ ರೀತಿಯಲ್ಲಿ ಮುಗಿಸಬೇಕೂಂತ ಕೆಲವು ಮಾಧ್ಯಮದವರು ಕಾದು ಕುಳಿತಿದ್ದಾರೆ. ಈ ಮಾಧ್ಯಮಗಳ ವ್ಯವಸ್ಥಾಪಕರಿಗೆ ನನ್ನ ಮೇಲೆ ಯಾಕಿಷ್ಟು ಕೋಪವೋ ಗೊತ್ತಾಗುತ್ತಿಲ್ಲ ಎಂದರು.

ಮಾಧ್ಯಮಗಳಲ್ಲಿ ನನ್ನ ವಿರುದ್ಧವಾದ ಹೇಳಿಕೆಗಳನ್ನೇ ಪ್ರಸಾರ ಮಾಡಲಾಗುತ್ತದೆ. ಮಂಡ್ಯದ ಬಗ್ಗೆ ನನ್ನ ಹೇಳಿಕೆ ಪ್ರಸಾರ ಮಾಡುವಾಗಲೂ ನನ್ನ ವಿರೋಧಿಗಳ ದೃಶ್ಯಾವಳಿಗಳು ಬಿತ್ತರವಾಗುತ್ತಿರುತ್ತದೆ. ನಿಜವಾಗಿಯೂ ಈ ಮಾಧ್ಯಮಗಳಿಗೆ ಎಥಿಕ್ಸೃ್ ಇದೆಯಾ? ನಿಖಿಲ್ ವಿರುದ್ಧ ಮಾಧ್ಯಮಗಳಲ್ಲಿ ನೀಡಿದ ಪ್ರಚಾರ ಅವರಿಗೆ ಈಗಾಗಲೆ ಸಮಾಧಾನಕರವಾಗಿರಬೇಕು. ಕೇವಲ ಮಂಡ್ಯದಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆ ಎಂಬಂತೆ ಬಿಂಬಿಸಲಾಗಿದೆ ಎಂದ ಕುಮಾರಸ್ವಾಮಿ, ನನಗೆ ಈ ಒಂಬತ್ತು ತಿಂಗಳಲ್ಲಿ ಇವರೆಲ್ಲಾ ಸೇರಿಗೊಂಡು ಯಾವ ರೀತಿ ಟಾರ್ಚರ್ ಮಾಡುತ್ತಿದ್ದಾರೆ ಎಂಬುದಕ್ಕೆ ಹಳೆಯ ದೃಶ್ಯಾವಳಿಗಳನ್ನು ರಿವೈಂಡ್ ಮಾಡಿಕೊಳ್ಳಲಿ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News