ಓಟಿಗಾಗಿ ಉಗ್ರ ಪ್ರತ್ರ್ಯೇಕತಾವಾದಿಗಳ ಜೊತೆ ಬಿಜೆಪಿ ದೋಸ್ತಿ !

Update: 2019-04-08 09:03 GMT

ಮಣಿಪುರ, ಎ.8: ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಅಥವಾ ಶಿಕ್ಷೆಯನ್ನು ಎದುರಿಸಲು ತಯಾರಾಗಿ….. ಇದು ಮಣಿಪುರದಲ್ಲಿ ಉಗ್ರ ಪ್ರತ್ರ್ಯೇಕತಾವಾದಿಗಳ ಗುಂಪೊಂದು ಮತದಾರರಿಗೆ ಒಡ್ಡಿದ ಬೆದರಿಕೆ. ಇಷ್ಟೇ ಅಲ್ಲದೆ ಬಿಜೆಪಿಯು ಇನ್ನೊಂದು ಉಗ್ರ ಪ್ರತ್ರ್ಯೇಕತಾವಾದಿಗಳ ಗುಂಪು ಹೆಸರಿಸಿದ್ದ ಅಭ್ಯರ್ಥಿಗೆ ಟಿಕೆಟ್ ನೀಡಿದೆ ಎನ್ನುವ ಬಗ್ಗೆಯೂ ವ್ಯಾಪಕ ಚರ್ಚೆಗಳಾಗುತ್ತಿವೆ.

“ಉಗ್ರ ಪ್ರತ್ರ್ಯೇಕತಾವಾದಿಗಳ ಗುಂಪೊಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾರಿಗೆ ಪತ್ರ ಬರೆದಿದ್ದು, ಔಟರ್ ಮಣಿಪುರದಿಂದ ಎಚ್.ಎಸ್. ಬೆಂಜಮಿನ್ ಮೇಟ್ ಗೆ ಟಿಕೆಟ್ ನೀಡಿದರೆ ಕೃತಜ್ಞನಾಗಿ ಇರುವುದಾಗಿ ತಿಳಿಸಿದೆ” ಎಂದು ರವಿ ನಾಯರ್ ಎಂಬವರು ಟ್ವೀಟ್ ಮಾಡಿದ್ದು, ಉಗ್ರ ಪ್ರತ್ರ್ಯೇಕತಾವಾದಿಗಳ ಗುಂಪು ಅಮಿತ್ ಶಾಗೆ ಬರೆದದ್ದು ಎನ್ನಲಾದ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

“ಈಶಾನ್ಯ ರಾಜ್ಯದ ಮತ್ತೊಂದು ಉಗ್ರ ಪ್ರತ್ರ್ಯೇಕತಾವಾದಿಗಳ ಗುಂಪು ಕುಕಿ ನ್ಯಾಶನಲ್ ಆರ್ಮಿ ಗ್ರಾಮದ ಮುಖ್ಯಸ್ಥರನ್ನು ಬೆದರಿಸಿದೆ. ಔಟರ್ ಮಣಿಪುರ್ ನಿಂದ 90 ಶೇ. ಮತಗಳು ಬಿಜೆಪಿಗೆ ಬೀಳದಿದ್ದಲ್ಲಿ, ಗ್ರಾಮದ ಮುಖ್ಯಸ್ಥರಿಗೆ ಶಿಕ್ಷೆ ನೀಡಲಾಗುವುದು ಎಂದು ಬೆದರಿಸಲಾಗಿದೆ. ‘ದೇಶ ಮೊದಲು’, ‘ನಾವು ಭಯೋತ್ಪಾದನೆಯನ್ನು ಅಳಿಸಿ ಹಾಕುತ್ತೇವೆ”, ‘ಅಖಂಡ್ ಭಾರತ್’ ಎನ್ನುವ ಬಿಜೆಪಿ ನಾಯಕರ ನಿಜವಾದ ಮುಖಗಳಿವು” ಎಂದವರು ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಸ್ಥಳೀಯ ವೆಬ್ ಸೈಟ್ ಗಳೂ ಈ ಬಗ್ಗೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News