×
Ad

ಮನೆಯ ಮೇಲಿನಿಂದ ಬಿದ್ದು ಮೃತ್ಯು

Update: 2019-04-09 22:21 IST

ಉಡುಪಿ, ಎ.9: ಮನೆಯೊಂದರ ಕಿಟಕಿಗೆ ಅಲ್ಯೂಮಿನಿಯಂ ಬಾಗಿಲು ಗಳನ್ನು ಅಳವಡಿಸುತ್ತಿದ್ದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಎ.8ರಂದು ಸಂಜೆ ವೇಳೆ ಗುಂಡಿಬೈಲು ಎಂಬಲ್ಲಿ ನಡೆದಿದೆ.

ಮೃತರನ್ನು ಉದ್ಯಾವರ ಮೇಲ್ಪೇಟೆಯ ಮುಹಮ್ಮದ್ ಹನೀಫ್ ಎಂಬವರ ಮಗ ತಬ್ರಝ್ (29) ಎಂದು ಗುರುತಿಸಲಾಗಿದೆ.

ಇವರು ಗುಂಡಿಬೈಲು ಸುರೇಶ್ ರಾವ್ ಎಂಬವರ ಮನೆಯ ಕಿಟಕಿಗೆ ಅಲ್ಯೂಮಿನಿಯಂ ಬಾಗಿಲು ಗಳನ್ನು ಅಳವಡಿಸುತ್ತಿದ್ದಾಗ ಮೇಲಿನಿಂದ ಬಿದ್ದು ಗಂಭೀರ ವಾಗಿ ಗಾಯ ಗೊಂಡಿದ್ದು, ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News