ಪ್ರಮೋದ್ ಮಧ್ವರಾಜ್ ರನ್ನು ಸಂಸತ್ತಿಗೆ ಆರಿಸಿ: ದಿನೇಶ್ ಪುತ್ರನ್

Update: 2019-04-10 14:30 GMT

ಉಡುಪಿ, ಎ.10: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 2000 ಕೋಟಿ ರೂ. ಅಧಿಕ  ಅನುದಾನವನ್ನು ಕ್ರೋಢೀಕರಿಸುವುದರಲ್ಲಿ ಪ್ರಮೋದ್ ಮಧ್ವರಾಜ್ ಅವರ ಸಾಧನೆ ಮಹತ್ತರವಾದದು, ಅವರನ್ನು ಸಂಸತ್ತಿಗೆ ಆರಿಸಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ದಿನೇಶ್ ಪುತ್ರನ್ ಹೇಳಿದ್ದಾರೆ.

ಕಡೆಕಾರು, ಕುತ್ಪಾಡಿ, ಕಿದಿಯೂರು, ಬಡಗಬೆಟ್ಟು, ಸಗ್ರಿಯಲ್ಲಿ ಇಂದು ನಡೆದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಸೆಭೆಯಲ್ಲಿ ಅವರು ಮಾತನಾಡುತಿದ್ದರು.

ಸದಾ ಜನರ ಸಂಪರ್ಕವನ್ನು ಬೆಳೆಸಿಕೊಂಡು ಬಂದಂಹ ಪ್ರಮೋದ್ ಕೆಲವೊಂದು ಅಪಪ್ರಚಾರದಲ್ಲಿ ಕಳೆದ ವಿಧಾನಸಭಾ ಚುನಾವೆಣೆಯಲ್ಲಿ ಸೋಲನ್ನು ಕಾಣುವಂತಾಯಿತು. ಆದರೂ ಜನರ ಸೇವೆಯನ್ನು ನಿಲ್ಲಿಸದೆ ಈ ಹಿಂದೆ ಯಾವ ರೀತಿಯಲ್ಲಿ ಜನರ ಸೇವೆಯನ್ನು ಮಾಡಿದ್ದಾರೋ ಅದೇ ರೀತಿ ಯಲ್ಲಿ ಸೇವೆಯನ್ನು ಮಾಡಿರುವುದು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಹೆಮ್ಮೆಯ ವಿಚಾರ ಎಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಇರುವುದರಿಂದ ಈ ಕ್ಷೇತ್ರದಿಂದ ಸಂಸತ್ತಿಗೆ ಸ್ಫರ್ಧಿಸುವ ಅವಕಾಶವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಅವರಿಗೆ ನೀಡಿದ್ದ ರಿಂದ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸ್ಪರ್ಧಿಸುತ್ತಿದ್ದಾರೆ. ಅವರ ಚಿಹ್ನೆಯಾದ ತೆನೆಹೊತ್ತ ಮಹಿಳೆಗೆ ಮತವನ್ನು ನೀಡುವುದರೊಂದಿಗೆ ಅವರನ್ನು ಸಂಸತ್ತಿಗೆ ಆರಿಸಬೇಕು ಎಂದು ಅವರು ಮನವಿ ಮಾಡಿದರು.

ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಪ್ರಮುಖರಾದ ದಿವಾಕರ ಕುಂದರ್, ಸದಾಶಿವ ಕಟ್ಟೆಗುಡ್ಡೆ, ಜನಾರ್ದನ ಭಂಡಾರ್ಕಾರ್, ಶೇಖರ್ ಜಿ.ಕೋಟ್ಯಾನ್, ನಾರಾಯಣ ಕುಂದರ್, ಮುರಳಿ ಶೆಟ್ಟಿ, ಪ್ರಶಾಂತ್ ಪೂಜಾರಿ, ಪ್ರಖ್ಯಾತ್ ಶೆಟ್ಟಿ, ತಾರಾನಾಥ ಕಡೆಕಾರ್, ಕೀರ್ತಿ ಶೆಟ್ಟಿ, ಅಲೆವೂರು ಹರೀಶ್ ಕಿಣಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News