​ಮರಣಪತ್ರ ಬರೆದಿಟ್ಟು ಯುವಕ ಆತ್ಮಹತ್ಯೆ

Update: 2019-04-10 16:44 GMT

ಬೈಂದೂರು, ಎ.10: ಮರಣಪತ್ರ ಬರೆದಿಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.8ರಂದು ರಾತ್ರಿ ವೇಳೆ ಬೈಂದೂರು ಸಮೀಪದ ಬಂಕೇಶ್ವರ ಎಂಬಲ್ಲಿ ನಡೆದಿದೆ.

ಮೃತರನ್ನು ಕೊಪ್ಪಳ ಮೂಲದ ಮುತ್ತು ಭಂಡಾರಿ(26) ಎಂದು ಗುರುತಿಸ ಲಾಗಿದೆ. ಕೊಲ್ಲೂರಿನಲ್ಲಿ ಕೆಲಸ ಮಾಡುತ್ತಿದ್ದ ಇವರು ಯಾವುದೋ ಕಾರಣಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಮರಣ ಪತ್ರ ಬರೆದಿಟ್ಟು ಬಾಡಿಗೆ ರೂಮಿನ ಸೀಲಿಂಗ್ ಹುಕ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News