ವಾಹನಗಳ ಸ್ಟಿಕ್ಕರ್ ತೆರವು
Update: 2019-04-10 22:37 IST
ಉಡುಪಿ, ಎ.10: ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಉಡುಪಿ ವಿಧಾನಸಬಾ ವ್ಯಾಪ್ತಿಯಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರತಾಪ ಮತ್ತಿತರರ ವಾಹನದ ಹಿಂಬದಿಯಲ್ಲಿ ಹಾಕಲಾದ ಮೈ ಬಿ ಚೌಕಿದಾರ್ ಸ್ಟಿಕ್ಕರ್ನ್ನು ಮಾದರಿ ನೀತಿ ಸಂಹಿತೆ ತಂಡದ ಜಿಲ್ಲಾ ನೋಡೆಲ್ ಅಧಿಕಾರಿ ಭಾಸ್ಕರ ಮತ್ತಿತರ ಚುನಾವಣಾ ಅಧಿಕಾರಿಗಳ ಸಹಯೋಗದಲ್ಲಿ ತೆರವು ಮಾಡಲಾಯಿತು ಎಂದು ಉಡುಪಿ ವಿಧಾನಸಬಾ ಕ್ಷೇತ್ರದ ಎಂಸಿಸಿ ತಾಲೂಕು ನೋಡೆಲ್ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.