ಮಣಿಪಾಲ: ರೈಲಿನಲ್ಲಿ ಕಳವು

Update: 2019-04-11 17:24 GMT

ಮಣಿಪಾಲ, ಎ.11: ಮುಂಬೈ ಥಾಣೆ ನಿಲ್ದಾಣದಿಂದ ಉಡುಪಿಗೆ ಕೊಚ್ಚಿವೆಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತಿದ್ದ ಮುಂಬೈ ಥಾಣೆ ಮೀರಾರೋಡ್‌ನ ನಿವಾಸಿ ಮೋಹಿನಿ ಕುಮಾರ್ ಎಂಬವರ 131 ಗ್ರಾಂ ಚಿನ್ನಾಭರಣ ಹಾಗೂ 50,000 ರೂ.ನಗದನ್ನು ಎ.9ರ ಸಂಜೆ 5:30ರಿಂದ ಎ.10ರ ಬೆಳಗ್ಗೆ 7 ಗಂಟೆ ನಡುವಿನ ಅವಧಿಯಲ್ಲಿ ಕಳವು ಮಾಡಿರುವುದಾಗಿ ಮೋಹಿನಿ ಅವರು ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News